alex Certify ಕನ್ನಡದ ಖ್ಯಾತ ಧಾರಾವಾಹಿ ನಿರ್ದೇಶಕನಿಗೆ ಲಕ್ಷಾಂತರ ರೂ. ವಂಚನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡದ ಖ್ಯಾತ ಧಾರಾವಾಹಿ ನಿರ್ದೇಶಕನಿಗೆ ಲಕ್ಷಾಂತರ ರೂ. ವಂಚನೆ…!

ಮಧುಮಗಳು ಹಾಗೂ ಕಾವ್ಯಾಂಜಲಿ ಧಾರವಾಹಿಯ ಲೈನ್ ಪ್ರೊಡ್ಯೂಸಿಂಗ್ ಗೆ ಇನ್ವೆಸ್ಟ್ ಮಾಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು, ಕನ್ನಡದ ಕಿರುತೆರೆ ಲೋಕದ ಖ್ಯಾತ ನಿರ್ದೇಶಕರೊಬ್ಬರು ಆರೋಪಿಸಿದ್ದಾರೆ.

ಅರಗಿಣಿ, ಅವನು ಮತ್ತೆ ಶ್ರಾವಣಿ, ಕಾವ್ಯಾಂಜಲಿ ಸೇರಿದಂತೆ ಹಲವು ಧಾರವಾಹಿಗಳ ಎಪಿಸೋಡ್ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮಂಜುನಾಥ್ ಹನ್ನೊಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದೇನೆ ಎಂದು ದೂರು ನೀಡಿದ್ದಾರೆ.

SPECIAL: 97 ವಸಂತಗಳನ್ನು ಪೂರೈಸಿದ ಭಾರತದ ಎಲೆಕ್ಟ್ರಿಕ್​ ರೈಲು ಸೇವೆ..!

ಸತೀಶ್, ದೀಪಿಕಾ ಹಾಗೂ ಶಂಕರ್ ಎಂಬುವರಿಂದ ಮೋಸ ಹೋಗಿದ್ದೇನೆ ಎಂದು ಆರೋಪಿಸಿರುವ ಮಂಜುನಾಥ್, ಈ ಮೂವರು ತಮ್ಮ ಬಳಿ ಲೈನ್ ಪ್ರೊಡ್ಯೂಸಿಂಗ್ ಮಾಡುವುದಾಗಿ ಲಕ್ಷಾಂತರ ಇನ್ವೆಸ್ಟ್ ಮಾಡಿಸಿಕೊಂಡಿದ್ದರು. ಕಾವ್ಯಾಂಜಲಿ ಹಾಗೂ ಮಧುಮಗಳು ಎಂಬ ಧಾರಾವಾಹಿಗೆ ಲೈನ್ ಪ್ರೊಡ್ಯೂಸಿಂಗ್ ಗೆ ಇನ್ವೆಸ್ಟ್ ಮಾಡಿಸಿಕೊಂಡಿದ್ದರು. ಕಾವ್ಯಾಂಜಲಿ ಧಾರಾವಾಹಿಯ ಪ್ರತಿ ಸಂಚಿಕೆಗೆ 1000 ರೂ‌. ಹಾಗೂ ಮಧುಗಳು‌ ಧಾರವಾಹಿಗೆ 900 ರೂ. ಕೊಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಒಪ್ಪಂದಂತೆ ಹಣವೂ ನೀಡದೆ, ಇನ್ವೆಸ್ಟ್ ಮಾಡಿಸಿಕೊಂಡ ಮೂಲ ಹಣವನ್ನು ನೀಡದೆ ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...