alex Certify ಕಣ್ಣಂಚಲ್ಲಿ ನೀರು ತರಿಸುತ್ತೆ ಪಿಜ್ಜಾ ತಿನ್ನಲು ಹೋದ ಬಡ ಮಕ್ಕಳು ನಿರಾಸೆಯಿಂದ ಹಿಂದಿರುಗಿದ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚಲ್ಲಿ ನೀರು ತರಿಸುತ್ತೆ ಪಿಜ್ಜಾ ತಿನ್ನಲು ಹೋದ ಬಡ ಮಕ್ಕಳು ನಿರಾಸೆಯಿಂದ ಹಿಂದಿರುಗಿದ ಘಟನೆ

ಮನುಷ್ಯನ ಉಡುಗೆ ತೊಡುಗೆ ಆತನ ಯೋಗ್ಯತೆಯನ್ನ ನಿರ್ಧರಿಸುತ್ತೆ ಅನ್ನೋ ಮಾತಿದೆ. ಅದರೆ ಅದೆಲ್ಲ ನಿಜವಲ್ಲ. ಎಷ್ಟೋ ಬಾರಿ ನಾವು ಒಬ್ಬ ವ್ಯಕ್ತಿ ಹಾಕಿರೋ ಬಟ್ಟೆಯಿಂದಾನೇ ಆತ ಅಕ್ಷರಸ್ಥನೋ, ಶ್ರೀಮಂತನೋ, ಹಳ್ಳಿಯವನೋ ಅಂತೆಲ್ಲ ಲೆಕ್ಕಾಚಾರ ಹಾಕಿಬಿಡ್ತೇವೆ. ಈಗ ಇದೇ ರೀತಿಯ ಅರ್ಥ ಕೊಡುವಂತಹ ವಿಡಿಯೋ ಒಂದು ವೈರಲ್ ಆಗಿದೆ.

ಇಲ್ಲಿ ಮೂವರು ಮಕ್ಕಳು ಒಂದು ಸಬ್ರೋ ಅನ್ನೊ ಪಿಜ್ಜಾ ಅಂಗಡಿಗೆ ಹೋಗಿದ್ದಾರೆ. ಆ ಅಂಗಡಿ ಒಳಗೆ ಹೋದವರೇ ಅಲ್ಲಿದ್ದ ಟೇಬಲ್ ಮೇಲೆ ಕುಳಿತುಕೊಳ್ಳುತ್ತಾರೆ. ಅವರಿಗೆ ಅಲ್ಲಿ ತಿನ್ನಲು ಏನಾದರೂ ಸಿಗುತ್ತೆ ಅನ್ನೋ ಆಸೆ. ಹಸಿವೆಯಿಂದ ಸುತ್ತಲೂ ಕಣ್ಣಾಡಿಸುತ್ತಿರುವಾಗಲೇ ಅಲ್ಲಿಗೆ ಬರುತ್ತಾನೆ ಅದೇ ಅಂಗಡಿಯ ಸಿಬ್ಬಂದಿ.
ಸಬ್ರೋ ಅಂಗಡಿಯಲ್ಲಿ ಕೆಲಸ ಮಾಡುವ ಈ ಸಿಬ್ಬಂದಿ, ಬಂದು ಅವರನ್ನ ಹೊರಗೆ ಅಟ್ಟಿಬಿಡುತ್ತಾನೆ. ಆತ ಗದರಿಸಿದ ಪರಿಗೆ ಆ ಮಕ್ಕಳು ಶಾಕ್ ಆಗಿರ್ತಾರೆ. ಅಷ್ಟಕ್ಕೂ ಆತ ಆ ಮಕ್ಕಳನ್ನ ಹಾಗೆ ಹೊರಗೆ ಕಳುಹಿಸಿದ್ದು ಯಾಕೆ ಗೊತ್ತಾ..? ಆ ಮಕ್ಕಳು ಹಾಕಿದ ಬಟ್ಟೆ. ಅವರಿಗೆ ಅಲ್ಲಿದ್ದ ಪಿಜ್ಜಾ ಖರೀದಿಸಿ ತಿನ್ನುವಷ್ಟು ಹಣ ಇಲ್ಲ ಅಂತ ಆತ ತೀರ್ಮಾನಿಸಿಬಿಟ್ಟಿದ್ದ.

ಹಸಿದು, ಆಸೆಯಿಂದ ಬಂದ ಮಕ್ಕಳು ಬೇರೆ ವಿಧಿಯೇ ಇಲ್ಲದೇ ಪಿಜ್ಜಾ ಅಂಗಡಿಯಿಂದ ಹೊರಗೆ ಹೋಗುತ್ತಾರೆ. ಆ ಮಕ್ಕಳಿಗೆ ಏನು ಬೇಕು ಅಂತ ಕೇಳುವಷ್ಟು ಸೌಜನ್ಯ ಆ ವ್ಯಕ್ತಿಗೆ ಇರಲಿಲ್ಲ. ಟ್ವಿಟ್ಟರ್​​ನಲ್ಲಿ ಅಪ್ಲೋಡ್ ಮಾಡಲಾಗಿರೋ ವಿಡಿಯೋ ನೋಡಿ ನೆಟ್ಟಿಗರು ಮನುಷ್ಯ ಎಷ್ಟು ಯಾಂತ್ರಿಕನಾಗಿ ಬಿಟ್ಟಿದ್ದಾನೆ. ಆತನಿಗೆ ಕರುಣೆ, ಮನುಷ್ಯತ್ವವೇ ಇಲ್ಲಾ ಅಂತ ಹೇಳಿ ಬೈಯ್ಯುತ್ತಿದ್ದಾರೆ.

— ਹਤਿੰਦਰ ਸਿੰਘ (@Hatindersinghr3) June 27, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...