alex Certify ಈ ರಾಶಿಯ ಕೃಷಿಕರಿಗೆ ಇದೆ ಇಂದು ಉತ್ತಮ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಕೃಷಿಕರಿಗೆ ಇದೆ ಇಂದು ಉತ್ತಮ ಲಾಭ

ಮೇಷ : ಯಾರನ್ನೂ ಕೀಳರಿಮೆಯಿಂದ ಕಾಣಬೇಡಿ. ಹೊಸ ಕಚೇರಿಯ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದೀರಿ. ಹೊಸ ಸ್ನೇಹಿತರನ್ನು ಸಂಪಾದಿಸಲಿದ್ದೀರಿ. ಇಂದು ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಿರುವ ಕಾರಣ ಹೊರಗಿನ ಆಹಾರವನ್ನು ಸೇವನೆ ಮಾಡಬೇಡಿ.

ವೃಷಭ : ವಿದ್ಯಾರ್ಥಿಗಳು ಓದಿನ ಕಡೆಗೆ ಕಡಿಮೆ ಆಸಕ್ತಿ ತೋರಲಿದ್ದಾರೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಲಿದೆ. ಉದ್ಯಮಿಗಳು ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ಕೃಷಿಕರಿಗೆ ಉತ್ತಮ ಲಾಭವಿದೆ.

ಮಿಥುನ : ಹಿಡಿದ ಕಾರ್ಯ ಕೈಗೂಡಿದ ಪರಿಣಾಮ ನಿಮ್ಮ ಸಂಪತ್ತು ದುಪ್ಪಟ್ಟಾಗಲಿದೆ. ಇದರಿಂದ ನೀವು ಸಂತೋಷದಿಂದ ಇರಲಿದ್ದೀರಿ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಗಳಿಗೆ ಬೆಂಬಲ ನೀಡಲಿದ್ದಾರೆ. ಮಕ್ಕಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು.

ಕಟಕ : ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ನಿಮ್ಮಿಂದ ಸಾಧ್ಯ ಎಂದಾದಲ್ಲಿ ಮಾತ್ರ ಅದನ್ನು ವಹಿಸಿಕೊಳ್ಳಿ. ಇಲ್ಲವಾದಲ್ಲಿ ಸುಮ್ಮನೇ ಇನ್ನೊಬ್ಬರ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಸಿಂಹ : ಸ್ತ್ರೀಯರು ಇಂದು ಶುಭ ಸುದ್ದಿಯನ್ನು ಕೇಳಲಿದ್ದಾರೆ. ವಿದೇಶದಿಂದ ಸಂಬಂಧಿಗಳು ನಿಮ್ಮ ಮನೆಗೆ ಆಗಮಿಸಲಿದ್ದಾರೆ. ಆಹಾರ ಸಮಸ್ಯೆಯಿಂದಾಗಿ ಹೊಟ್ಟೆನೋವಿನಿಂದ ಬಳಲಿದ್ದೀರಿ. ನಕಾರಾತ್ಮಕ ಚಿಂತೆಗಳನ್ನು ಬಿಟ್ಟುಬಿಡಿ.

ಕನ್ಯಾ : ಪೋಷಕರಿಗೆ ಸೂಕ್ತ ಆರೋಗ್ಯ ತಪಾಸಣೆ ಮಾಡಿ. ಸರ್ಕಾರಿ ಅಧಿಕಾರಿಗಳಿಗೆ ದಿಢೀರ್​ ವರ್ಗಾವಣೆ ಆದೇಶ ಆಘಾತ ತರಬಹುದು. ಉದ್ಯಮದಲ್ಲಿ ಶ್ರಮವಹಿಸಿದರೂ ಲಾಭ ಮಾತ್ರ ಸಮಾಧಾನಕರ ರೀತಿಯಲ್ಲಿ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಕಿರಿಕಿರಿ ಮುಂದುವರಿಯಲಿದೆ.

ತುಲಾ : ಸಂಗಾತಿಯನ್ನು ಸಂತುಷ್ಟಗೊಳಿಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದೀರಿ. ನಿಮ್ಮ ಈ ಗುಣ ಸಂಗಾತಿಯ ಸಂತೋಷಕ್ಕೆ ಕಾರಣವಾಗಲಿದೆ. ನಿಧಾನವಾಗಿ ನಿಮ್ಮ ಒಂದೊಂದೆ ಕಷ್ಟವು ಕರಗಲಿದೆ. ಎಲ್ಲದಕ್ಕೂ ತಾಳ್ಮೆ ಇರಲಿ. ಶಿವನನ್ನು ಪ್ರಾರ್ಥನೆ ಮಾಡಿ.

ವೃಶ್ಚಿಕ : ಸಂಗಾತಿ ಹೇಳಿದ ಮಾತೆಲ್ಲವೂ ಸತ್ಯ ಎಂದು ನಂಬಬೇಡಿ. ಕೆಲವೊಮ್ಮೆ ಸತ್ಯ ಏನು ಎಂಬೋದನ್ನ ಓರೆಗಲ್ಲಿಗೆ ಹಚ್ಚಿ ನೋಡಿ. ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುವ ಮೂಲಕ ವಿಶ್ವಾಸ ಗಳಿಸಿಕೊಳ್ಳುತ್ತೀರಿ. ಪತಿಯ ಐಶ್ವರ್ಯದಿಂದ ಪತ್ನಿಗೆ ಜಂಭ ಬರುವ ಸಾಧ್ಯತೆ ಇದೆ.

ಧನು : ಗುತ್ತಿಗೆ ಕಾರ್ಮಿಕರಿಗೆ ಬೇಡಿಕೆ ಹೆಚ್ಚಲಿದೆ. ಕುಟುಂಬಸ್ಥರ ನಡುವೆ ಸಣ್ಣ ಕಲಹ ಏರ್ಪಡಬಹುದು. ರಾಜಕೀಯ ವ್ಯಕ್ತಿಗಳಿಗೆ ಸಾರ್ವಜನಿಕ ಮನ್ನಣೆ ಸಿಗಲಿದೆ. ವಿದ್ಯಾರ್ಥಿಗಳು ವಿದೇಶಿ ಪ್ರಯಾಣ ಮಾಡಲಿದ್ದಾರೆ.

ಮಕರ : ಮನೆಗೆ ಅನಿರೀಕ್ಷಿತ ಅತಿಥಿ ಆಗಮನದಿಂದ ನೀವು ಬಿಡುವಿಲ್ಲದ ಕೆಲಸದಲ್ಲಿ ತೊಡಗಲಿದ್ದೀರಿ. ಸಂಗಾತಿಯೊಂದಿಗೆ ಉತ್ತಮ ಸಂಬಂಧ ಕಳೆಯಲಿದ್ದೀರಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.

ಕುಂಭ : ಅತಿಯಾದ ಕೆಲಸದ ಒತ್ತಡದಿಂದ ಮಾನಸಿಕ ಹಿಂಸೆ ಅನುಭವಿಸಲಿದ್ದೀರಿ. ವೈದ್ಯಕೀಯ ವೃತ್ತಿಯವರಿಗೆ ಮನ್ನಣೆ ಸಿಗಲಿದೆ. ಸಾಲ ಕೊಟ್ಟವರು ನಿಮಗೆ ಕಿರಿಕಿರಿ ಮಾಡಲಿದ್ದಾರೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ.

ಮೀನ : ಮೇಲಾಧಿಕಾರಿಗಳಿಂದ ನಿಮಗೆ ಮೆಚ್ಚುಗೆಯ ಮಾತು ಸಿಗಲಿದೆ. ಕಲಾವಿದರು ಉತ್ತಮ ಸಂಭಾವನೆ ಪಡೆಯಲಿದ್ದಾರೆ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಎಲ್ಲಾ ಒತ್ತಡಗಳಿಂದ ಇಂದು ವಿಶ್ರಾಂತಿ ಪಡೆಯಲಿದ್ದೀರಿ. ವ್ಯಾಪಾರದಲ್ಲಿ ಯಶಸ್ಸನ್ನು ಕಾಣುತ್ತೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...