alex Certify ಈ ರಾಶಿಯ ಕೃಷಿಕರಿಗೆ ಇಂದು ಲಾಭಕರ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಕೃಷಿಕರಿಗೆ ಇಂದು ಲಾಭಕರ ದಿನ

ಮೇಷ : ಗುರಿಯನ್ನು ತಲುಪಲು ವಿದ್ಯಾರ್ಥಿಗಳಿಗೆ ತಾಳ್ಮೆಯಿಂದ ಇರೋದು ಮಾತ್ರ ಸದ್ಯದ ಆಯ್ಕೆಯಾಗಿದೆ. ಮಹಿಳೆಯರಿಗೆ ಅನಿರೀಕ್ಷಿತ ಉಡುಗೊರೆಗಳು ಹುಡುಕಿಕೊಂಡು ಬರಲಿದೆ. ಕಚೇರಿ ಕೆಲಸದ ನಿಮಿತ್ತ ಅತಿಯಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು. ವಾರಾಂತ್ಯದಲ್ಲಿ ಸ್ನೇಹಿತರು ನಿಮ್ಮನ್ನು ಭೇಟಿಯಾಗುವ ಬಗ್ಗೆ ಮಾಹಿತಿ ನೀಡಲಿದ್ದಾರೆ.

ವೃಷಭ: ಹಿಮ್ಮಡಿ ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ಆರೋಗ್ಯದ ದೃಷ್ಟಿಯಿಂದ ಸಾತ್ವಿಕ ಆಹಾರಗಳ ಸೇವನೆ ಉತ್ಯಮ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಸೂಚನೆ ಸಿಗಲಿದೆ. ಮಕ್ಕಳ ಏಳ್ಗೆಯು ನಿಮ್ಮ ಸಂತೋಷಕ್ಕೆ ಕಾರಣವಾಗಲಿದೆ. ಆಧ್ಯಾತ್ಮಿಕ ಜೀವನದತ್ತ ಒಲವು ತೋರಲಿದ್ದೀರಿ.

ಮಿಥುನ : ನಿಮ್ಮಿಂದ ಸಹಾಯ ಪಡೆದವರೇ ನಿಮಗೆ ಬೆನ್ನಹಿಂದೆ ಚೂರಿ ಹಾಕಲಿದ್ದಾರೆ. ಶತ್ರುಗಳ ಕಾಟದಿಂದ ಆದಷ್ಟು ಎಚ್ಚರಿಕೆಯಿಂದಿರಿ. ಆತ್ಮೀಯರು ನಿಮ್ಮೆಲ್ಲ ಕಷ್ಟಗಳಿಗೆ ಹೆಗಲಾಗಲಿದ್ದಾರೆ. ಸಂಗಾತಿಯು ನಿಮ್ಮ ಜೊತೆ ಮುನಿಸು ಮಾಡಿಕೊಳ್ಳುವ ಸಾಧ್ಯತೆ ಇದೆ.

ಕಟಕ : ರಾಜಕೀಯ ವ್ಯಕ್ತಿಗಳ ಜನಪ್ರಿಯತೆ ಹೆಚ್ಚಾಗಬಹುದು. ವೈದ್ಯಕೀಯ ರಂಗದಲ್ಲಿ ಇರುವವರು ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ನೀವೆಂದುಕೊಂಡ ಕೆಲಸವು ಕೈಗೂಡಲಿದೆ. ಸ್ತ್ರೀಯರ ಜೊತೆ ಅತಿಯಾದ ಸಲುಗೆ ಸಲ್ಲದು.

ಸಿಂಹ : ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಹಣ್ಣಿನ ವ್ಯಾಪಾರಿಗಳು, ಕೃಷಿಕರಿಗೆ ಇದು ಲಾಭಕರ ದಿನವಾಗಿದೆ. ವಾದ ವಿವಾದಗಳಿಂದ ಕೊಂಚ ದೂರವೇ ಇರಿ. ದೇವಸ್ಥಾನಕ್ಕೆ ಭೇಟಿ ನೀಡಿ ಅರ್ಚನೆ ಮಾಡಿಸಿ. ಪುಣ್ಯ ಪ್ರಾಪ್ತಿ ಇದೆ.

ಕನ್ಯಾ : ಯಾವುದೇ ಕಾರ್ಯಕ್ಕೆ ಕೈ ಹಾಕುವ ಮುನ್ನ ಹಿರಿಯರಿಂದ ಸಲಹೆ ಪಡೆಯುವುದು ಉತ್ತಮ. ಆಸ್ತಿ ವಿಚಾರದಲ್ಲಿ ಸೊಸೆಯಂದಿರ ನಡುವೆ ಕಲಹ ಏರ್ಪಡಲಿದೆ. ಇದರಿಂದ ಮನೆಯ ನೆಮ್ಮದಿ ಹಾಳಾಗಲಿದೆ. ಕುಲದೇವರನ್ನು ಧ್ಯಾನಿಸಿ. ಶೀಘ್ರದಲ್ಲೇ ಕಷ್ಟ ಪರಿಹಾರವಾಗಲಿದೆ.

ತುಲಾ : ನಿಮ್ಮ ಮೇಲೆ ಬಂದಿರುವ ಅಪವಾದಗಳು ತಾನಾಗಿಯೇ ದೂರಾಗಲಿದೆ. ಇದರಿಂದ ನಿಮ್ಮ ಮನಸ್ಸಲ್ಲಿ ನೆಮ್ಮದಿ ನೆಲೆಸಲಿದೆ. ದೇವರ ದರ್ಶನ ಮಾಡಿ. ಉದ್ಯಮದಲ್ಲಿ ಧನ ಲಾಭ ಕಾದಿದೆ. ಸಂಗಾತಿಯ ಸಲಹೆಗಳು ನಿಮಗೆ ಪ್ರಯೋಜನಕಾರಿ ಎನಿಸಲಿದೆ.

ವೃಶ್ಚಿಕ : ಪೂರ್ವಜರು ಮಾಡಿದ ತಪ್ಪಿಗೆ ನೀವು ಬೆಲೆ ತೆರಬೇಕಾದ ಸಂದರ್ಭ ಎದುರಾಗಲಿದೆ. ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಒತ್ತಡವನ್ನು ಅನುಭವಿಸಲಿದ್ದಾರೆ. ಕೋರ್ಟ್ – ಕಚೇರಿ ಕೆಲಸಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದ್ದೀರಿ. ಕುಟುಂಬಸ್ಥರ ಒತ್ತಾಯಕ್ಕೆ ಮಣಿದು ಇಷ್ಟವಿಲ್ಲದ ಕೆಲಸ ಮಾಡಬೇಕಾಗಿ ಬರಬಹುದು.

ಧನು : ಯಾವುದೇ ಕಾರಣಕ್ಕೂ ಇಂದು ಯಾರಿಗೂ ಸಾಲ ನೀಡಲು ಹೋಗಲೇಬೇಡಿ. ಸಾಲ ನೀಡಿದಲ್ಲಿ ಹಣ ವಾಪಸ್​ ಬರೋದು ಅನುಮಾನವೇ ಸರಿ. ಇಂದು ನಿಮಗೆ ಅಷ್ಟೇನು ಅದೃಷ್ಟಕರವಲ್ಲ. ವ್ಯಾಪಾರ ವ್ಯವಹಾರದಲ್ಲಿ ಬೆಳಗ್ಗೆ ನಷ್ಟ ಎದುರಿಸುತ್ತೀರಿ. ರಾಜಕೀಯ ವ್ಯಕ್ತಿಗಳಿಗೆ ಇದು ಲಾಭದ ದಿನ.

ಮಕರ : ಅನಿರೀಕ್ಷಿತ ಅವಕಾಶವೊಂದು ನಿಮ್ಮನ್ನು ಅರಸಿ ಬರಲಿದೆ. ಸಂಗೀತ ಸಾಧನಗಳ ಖರೀದಿ ಮಾಡಲಿದ್ದೀರಿ. ಮಕ್ಕಳ ತಪ್ಪು ನಿಮ್ಮ ಮನಸ್ಸಿಗೆ ನೋವುಂಟು ಮಾಡಲಿದೆ. ಆದರೆ ಮಕ್ಕಳ ಮೇಲೆ ಕೋಪ ಬೇಡ. ತಾಳ್ಮೆಯಿಂದ ಬುದ್ಧಿ ಹೇಳಿ. ಸಂಗಾತಿ ಜೊತೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.

ಕುಂಭ : ಕಚೇರಿ ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನು ಕೇಳಲಿದ್ದೀರಿ. ಸ್ಪರ್ಧೆಯಲ್ಲಿ ಮಕ್ಕಳು ಭರ್ಜರಿ ಬಹುಮಾನ ಗೆಲ್ಲಲಿದ್ದಾರೆ. ಇದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇದೆ.

ಮೀನ : ಹೊಸ ಉದ್ಯಮವನ್ನು ಆರಂಭಿಸಲಿರುವ ನಿಮಗೆ ಸ್ನೇಹಿತರಿಂದ ಆರ್ಥಿಕ ಸಹಾಯ ಸಿಗಲಿದೆ. ಸ್ನೇಹಿತರೊಂದಿಗೆ ಔತಣ ಕೂಟಕ್ಕೆ ತೆರಳಲಿದ್ದೀರಿ. ವಿರೋಧಿಗಳ ಯೋಚನೆ ತಲೆಕೆಳಗಾಗುವಂತ ಸಾಧನೆಯನ್ನು ಮಾಡಲಿದ್ದೀರಿ . ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...