alex Certify ಈ ರಾಶಿಯವರ ಆರೋಗ್ಯ ಇಂದು ಉತ್ತಮವಾಗಿರಲಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರ ಆರೋಗ್ಯ ಇಂದು ಉತ್ತಮವಾಗಿರಲಿದೆ

ಮೇಷ ರಾಶಿ

ಇಂದು ನಿಮ್ಮ ಪಾಲಿಗೆ ಅನುಕೂಲಕರ ದಿನ. ಇವತ್ತು ಆರೋಗ್ಯವಾಗಿರುತ್ತೀರಿ. ಮನಸ್ಪೂರ್ವಕವಾಗಿ ಎಲ್ಲಾ ಕೆಲಸಗಳನ್ನು ನೆರವೇರಿಸುತ್ತೀರಿ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರಲಿದೆ.

ವೃಷಭ ರಾಶಿ

ಇವತ್ತಿನ ದಿನವನ್ನು ಸಮಾಧಾನದಿಂದ ಕಳೆಯಲು ಪ್ರಯತ್ನಿಸಿ. ಅನೇಕ ಚಿಂತೆಗಳಿಂದ ಮನಸ್ಸು ಅಸ್ತವ್ಯಸ್ತವಾಗಬಹುದು. ಆತ್ಮೀಯರು ಮತ್ತು ಕುಟುಂಬದವರೊಂದಿಗೆ ವಿವಾದ ಉಂಟಾಗುವ ಸಾಧ್ಯತೆ ಇದೆ. ಅನಾವಶ್ಯಕ ಖರ್ಚು ಮಾಡಬೇಡಿ.

ಮಿಥುನ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಅವಿವಾಹಿತರಿಗೆ ಸೂಕ್ತ ಜೀವನ ಸಂಗಾತಿ ದೊರೆಯಬಹುದು. ಧನಪ್ರಾಪ್ತಿಗೂ ಶುಭ ದಿನ. ಉದ್ಯೋಗ ಮತ್ತು ಉದ್ಯಮದಲ್ಲಿ ಲಾಭ ದೊರೆಯಲಿದೆ.

ಕರ್ಕ ರಾಶಿ

ಇವತ್ತು ಎಲ್ಲಾ ಕಾರ್ಯಗಳು ಸರಳವಾಗಿ ಪೂರ್ಣಗೊಳ್ಳಲಿವೆ. ಪದೋನ್ನತಿ ದೊರೆಯುವ ಯೋಗವಿದೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಸರ್ಕಾರದಿಂದ ಲಾಭವಾಗಲಿದೆ.

ಸಿಂಹ ರಾಶಿ

ಇವತ್ತಿನ ದಿನ ನಿಮ್ಮ ಪಾಲಿಗೆ ಮಿಶ್ರ ಫಲದಾಯಕವಾಗಿದೆ. ನಿರ್ಧಾರಿತ ಕೆಲಸಗಳ ಬಗ್ಗೆ ಹೆಚ್ಚು ಗಮನ ಹರಿಸಿ. ಮಕ್ಕಳ ಬಗ್ಗೆ ಚಿಂತೆ ಕಾಡಬಹುದು. ವ್ಯಾಪಾರದಲ್ಲೂ ಅಡಚಣೆ ಎದುರಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಸಮಯ ಅನುಕೂಲಕರವಾಗಿಲ್ಲ. ನೀವು ಹೆಚ್ಚು ಕೋಪಗೊಳ್ಳಲಿದ್ದೀರಿ. ಮಾತಿನ ಮೇಲೆ ಸಂಯಮವಿರಲಿ. ಹೆಚ್ಚು ಹಣ ಖರ್ಚಾಗಬಹುದು. ವಿರೋಧಿಗಳೊಂದಿಗೆ ಜಗಳಕ್ಕಿಳಿಯಬೇಡಿ.

ತುಲಾ ರಾಶಿ

ಇವತ್ತು ಮೋಜು-ಮಸ್ತಿ ಮತ್ತು ಮನರಂಜನೆಯಲ್ಲಿ ದಿನ ಕಳೆಯಲಿದ್ದೀರಿ. ಆರೋಗ್ಯ ಉತ್ತಮವಾಗಿರಲಿದೆ. ಸಮಾಜದಲ್ಲಿ ಜನರಿಂದ ಗೌರವ ಪ್ರತಿಷ್ಠೆ ದೊರೆಯಲಿದೆ.

ವೃಶ್ಚಿಕ ರಾಶಿ

ಗೃಹಸ್ಥ ಜೀವನದಲ್ಲಿ ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗಿರಲಿದೆ. ಅನಾರೋಗ್ಯ ಪೀಡಿತರು ಚೇತರಿಸಿಕೊಳ್ಳಲಿದ್ದಾರೆ. ಧನಲಾಭದ ಯೋಗವಿದೆ.

ಧನು ರಾಶಿ

ಸಾಧ್ಯವಾದ್ರೆ ಇವತ್ತಿನ ಪ್ರವಾಸವನ್ನು ಮೊಟಕುಗೊಳಿಸಿ. ಉದರ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಪ್ರಿಯ ವ್ಯಕ್ತಿಗಳೊಂದಿಗೆ ಆನಂದವಾಗಿ ಕಾಲ ಕಳೆಯುತ್ತೀರಿ. ಯಾರೊಂದಿಗೂ ಅನಾವಶ್ಯಕ ವಾದ-ವಿವಾದ ಬೇಡ.

ಮಕರ ರಾಶಿ

ಶಾರೀರಿಕ ಆರೋಗ್ಯ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಕಲಹದ ವಾತಾವರಣವಿರುವುದರಿಂದ ಮನಸ್ಸಿನಲ್ಲಿ ಖಿನ್ನತೆ ಆವರಿಸಬಹುದು. ಮಾನಸಿಕ ಉದ್ವೇಗ ಮತ್ತು ಪ್ರತಿಕೂಲ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಮಾನಸಿಕವಾಗಿ ನೆಮ್ಮದಿಯಾಗಿರುತ್ತೀರಿ. ಮನಸ್ಸನ್ನು ಆವರಿಸಿದ್ದ ಚಿಂತೆಯ ಕಾರ್ಮೋಡ ದೂರ ಸರಿಯಬಹುದು. ಪ್ರತಿಸ್ಪರ್ಧಿಗಳೆದುರು ನಿಮಗೆ ಗೆಲುವು ಸಿಗಲಿದೆ. ಮನಸ್ಸು ಉತ್ಸಾಹದಿಂದಿರುತ್ತದೆ.

ಮೀನ ರಾಶಿ

ಖರ್ಚಿನ ಮೇಲೆ ನಿಯಂತ್ರಣವಿರಲಿ. ಕೋಪ ಮತ್ತು ಮಾತನ್ನು ಕೂಡ ನಿಯಂತ್ರಣದಲ್ಲಿಡುವುದು ಅತ್ಯಗತ್ಯ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ನಕಾರಾತ್ಮಕ ಆಲೋಚನೆಗಳು ಬರದಂತೆ ನೋಡಿಕೊಳ್ಳಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...