alex Certify ಈ ರಾಶಿಯ ವಿದ್ಯಾರ್ಥಿಗಳಿಗಿದೆ ಇಂದು ಉತ್ತಮ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ವಿದ್ಯಾರ್ಥಿಗಳಿಗಿದೆ ಇಂದು ಉತ್ತಮ ಅವಕಾಶ

ಮೇಷ : ವ್ಯಾಪಾರದಲ್ಲಿ ಸಾಧಾರಣ ಲಾಭವಿದೆ. ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಬಹುದು. ಸಾಲಗಾರರ ಕಾಟದಿಂದ ಹೈರಾಣಾಗುವಿರಿ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ. ಕಚೇರಿ ಕೆಲಸದಲ್ಲಿ ಕಿರಿಕಿರಿ ಇರೋದಿಲ್ಲ. ಅಂದುಕೊಂಡ ಕಾರ್ಯವನ್ನು ಸಾಧಿಸಲು ಶ್ರಮ ಪಡುವಿರಿ.

ವೃಷಭ : ಅನ್ಯರಿಗೆ ಉಪಕಾರ ಮಾಡುವ ನಿಮ್ಮ ಗುಣವು ಸಾರ್ವಜನಿಕ ಜೀವನದಲ್ಲಿ ಗೌರವ ಹೆಚ್ಚಿಸಲಿದೆ. ಅನಾರೋಗ್ಯದಿಂದ ತೊಂದರೆ ಉಂಟಾದೀತು. ಹೊರಗಿನ ಆಹಾರ ಸೇವನೆ ಬೇಡ. ಪರಸ್ತ್ರೀಯರೊಂದಿಗೆ ಅತಿಯಾದ ಒಡನಾಟ ಕೂಡ ಒಳ್ಳೆಯದಲ್ಲ.

ಮಿಥುನ : ಅಂದುಕೊಂಡ ಕಾರ್ಯಗಳಿಗೆ ವಿಘ್ನ ಎದುರಾಗಲಿದೆ. ಶತ್ರುಗಳ ಕಾಟ ತಪ್ಪಿದ್ದಲ್ಲ. ಈ ದಿನ ನಿಮಗೆ ಮಿಶ್ರಫಲ ದೊರಕಲಿದೆ. ಶೀತ ಸಂಬಂಧಿ ಕಾಯಿಲೆಯಿಂದ ಬಳಲುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ.

ಕಟಕ : ಮನೆಯಲ್ಲಿ ಶುಭ ಕಾರ್ಯ ನಡೆಸಲು ಹಣದ ಅಡಚಣೆ ಎದುರಾಗಲಿದೆ. ಕೃಷಿಯಲ್ಲಿ ಲಾಭವಿದೆ. ಆಪ್ತರ ಜೊತೆ ಸಂಯಮದಿಂದ ಮಾತನಾಡಿ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ವೈವಾಹಿಕ ಸಂಬಂಧಕ್ಕಾಗಿ ಅರಸುತ್ತಿರುವವರಿಗೆ ಕಂಕಣ ಭಾಗ್ಯವಿದೆ.

ಸಿಂಹ : ದುಷ್ಟರಿಂದ ದೂರವಿರು ಎಂಬ ಗಾದೆ ಮಾತು ಕೇಳಿದ್ದೀರಿ ತಾನೆ. ಹಾಗಾದಲ್ಲಿ ಆದಷ್ಟು ಬೇಗ ಈ ಮಾತನ್ನು ಜೀವನದಲ್ಲಿ ಪಾಲಿಸಿ. ಅಡ್ಡದಾರಿಯಿಂದ ಸಾಧಿಸಿದ ಯಶಸ್ಸು, ಗಳಿಸಿದ ಸಂಪತ್ತು ಶಾಶ್ವತವಾಗಿ ನಿಮ್ಮ ಕೈ ಹಿಡಿಯುವುದಿಲ್ಲ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.

ಕನ್ಯಾ : ಅನಿರೀಕ್ಷಿತ ಮೂಲದಿಂದ ಧನಾಗಮನವಿದೆ. ಇದು ನಿಮ್ಮ ಸಂತಸಕ್ಕೆ ಕಾರಣವಾಗಲಿದೆ. ಮನೆಯಲ್ಲಿ ಮಗಳ ಮದುವೆಗೆಂದು ಚಿನ್ನಾಭರಣ ಖರೀದಿ ಮಾಡಲಿದ್ದೀರಿ. ಕಚೇರಿ ಕೆಲಸದಲ್ಲಿ ಅಭೂತಪೂರ್ವ ಯಶಸ್ಸೊಂದು ನಿಮ್ಮದಾಗಲಿದೆ. ದೂರ ಪ್ರಯಾಣ ಮಾಡಲಿದ್ದೀರಿ.

ತುಲಾ : ವಿದ್ಯಾರ್ಥಿಗಳು ಓದಿನಲ್ಲಿ ಮುನ್ನಡೆ ಕಾಣಲಿದ್ದಾರೆ. ಆಸ್ತಿ ವಿಚಾರದಲ್ಲಿ ದಾಯಾದಿಗಳ ನಡುವೆ ಕಲಹ ಉಂಟಾಗಲಿದೆ. ಮಕ್ಕಳ ಅನಾರೋಗ್ಯ ನಿಮ್ಮನ್ನು ಚಿಂತೆಗೀಡು ಮಾಡಬಹುದು. ಕುಟುಂಬ ಸಂಬಂಧಿ ಕಲಹಗಳಲ್ಲಿ ತೀರಾ ಮೂಗು ತೂರಿಸಬೇಡಿ.

ತುಲಾ : ಸ್ಥಿರಾಸ್ಥಿ ಸಂಪಾದನೆ ಮಾಡುವಿರಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ನಿಮ್ಮದಾಗಲಿದೆ. ಹೆಣ್ಣು, ಹೊನ್ನು, ಮಣ್ಣಿನ ಹಿಂದೆ ಬೀಳಬೇಡಿ. ಅದಾಗೆ ನಿಮ್ಮ ಹಿಂದೆ ಬರುವಂತಹ ಕೆಲಸ ಮಾಡಿ. ಮನೆಯಲ್ಲಿ ಔತಣ ಕೂಡ ಇರುವುದರಿಂದ ಬಂಧು ಮಿತ್ರರ ಸಮಾಗಮವಾಗಲಿದೆ.

ವೃಶ್ಚಿಕ : ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದು ನಿಮ್ಮ ಇಡೀ ದಿನದ ನೆಮ್ಮದಿಯನ್ನು ಹಾಳುಗೆಡವಲಿದೆ. ಮೋಜು – ಮಸ್ತಿಯ ನೆಪದಲ್ಲಿ ವ್ಯರ್ಥ ಹಣ ಪೋಲು ಮಾಡಬೇಡಿ. ಹಣವನ್ನು ಭವಿಷ್ಯಕ್ಕೆಂದು ಕೂಡಿಟ್ಟಲ್ಲಿ ನಿಮಗೆ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ಕರಿದ ಆಹಾರ ಸೇವನೆ ಮಾಡಬೇಡಿ.

ಧನು : ದುಷ್ಟರಿಂದ ದೂರವಿರು ಎಂಬ ಗಾದೆ ಮಾತು ಕೇಳಿದ್ದೀರಿ ತಾನೆ. ಹಾಗಾದಲ್ಲಿ ಆದಷ್ಟು ಬೇಗ ಈ ಮಾತನ್ನು ಜೀವನದಲ್ಲಿ ಪಾಲಿಸಿ. ಅಡ್ಡದಾರಿಯಿಂದ ಸಾಧಿಸಿದ ಯಶಸ್ಸು, ಗಳಿಸಿದ ಸಂಪತ್ತು ಶಾಶ್ವತವಾಗಿ ನಿಮ್ಮ ಕೈ ಹಿಡಿಯುವುದಿಲ್ಲ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.

ಮಕರ : ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣಲಿದೆ. ಧಾರ್ಮಿಕ ಕಾರ್ಯಗಳನ್ನು ನಡೆಸುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸಲಿದ್ದೀರಿ. ಯಾವುದೇ ಪರಿಸ್ಥಿತಿಯಲ್ಲೂ ಅತಿಯಾದ ಕೋಪ ಒಳ್ಳೆಯದಲ್ಲ. ತಾಳ್ಮೆ ಕಾಯ್ದುಕೊಂಡಷ್ಟೂ ನಿಮಗೇ ಒಳ್ಳೆಯದು. ಕುಟುಂಬಸ್ಥರ ಜೊತೆ ತೀರ್ಥಕ್ಷೇತ್ರಕ್ಕೆ ಪ್ರಯಾಣ ಬೆಳೆಸಲಿದ್ದೀರಿ.

ಕುಂಭ : ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರಲಿದೆ. ಶತ್ರು ಬಾಧೆಯಿದೆ. ಆಕಸ್ಮಿಕವಾಗಿ ನಷ್ಟ ಸಂಭವಿಸಲಿದೆ. ಮಿತ್ರದ್ರೋಹದಿಂದಾಗಿ ನೀವು ನೋವನ್ನು ಅನುಭವಿಸುವಿರಿ.

ಮೀನ : ಕೌಟುಂಬಿಕ ಜೀವನದಲ್ಲಿ ಇಲ್ಲಸಲ್ಲದ ತಕರಾರು ಸೃಷ್ಟಿಯಾಗಲಿದೆ. ಇದರಿಂದ ಮಾನಸಿಕ ಒತ್ತಡ ಉಂಟಾದೀತು. ಅನಾರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನಿಮ್ಮ ಮನಸ್ಸಿನ ನೋವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...