alex Certify ಈ ರಾಶಿಯವರು ಇಂದು ದೂರ ಪ್ರಯಾಣ ಮಾಡಲೇಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರು ಇಂದು ದೂರ ಪ್ರಯಾಣ ಮಾಡಲೇಬೇಡಿ

ಮೇಷ: ಹಿತಶತ್ರುಗಳ ಕಾಟ ನಿಮ್ಮನ್ನ ಭಾದಿಸಲಿದೆ. ದಿನಸಿ ವ್ಯಾಪಾರಿಗಳು ಅಭಿವೃದ್ಧಿ ಕಾಣಲಿದ್ದಾರೆ. ಕ್ರೀಡಾಳುಗಳು ಉತ್ತಮ ಸುದ್ದಿಯನ್ನ ಕೇಳುತ್ತೀರಾ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ವೃತ್ತಿರಂಗದಲ್ಲಿ ಕೊಂಚ ಕಿರಿಕಿರಿ ಇರಲಿದೆ. ಕುಲದೇವತೆಯನ್ನ ಪ್ರಾರ್ಥಿಸಿ.

ವೃಷಭ :ಕೌಟುಂಬಿಕ ವಿಚಾರದಲ್ಲಿ ಕೊಂಚ ಕಿರಿಕಿರಿ ಎದುರಿಸುತ್ತೀರಾ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ದವಸ ಧಾನ್ಯಗಳನ್ನ ದಾನ ಮಾಡಿ. ಶುಭಲಾಭವಿದೆ.

ಮಿಥುನ : ಪಿರ್ತಾಜ್ರಿತ ಆಸ್ತಿ ವಿಚಾರದಲ್ಲಿ ಇದ್ದ ಕಿರಿಕಿರಿಯೆಲ್ಲ ದೂರವಾಗಿ ನಿಮ್ಮ ಪಾಲು ನ್ಯಾಯಯುತವಾಗಿ ನಿಮ್ಮ ಕೈ ಸೇರಲಿದೆ. ನೆಂಟರಿಷ್ಟರಿಂದ ಉತ್ತಮ ಸಲಹೆಯನ್ನ ಸ್ವೀಕರಿಸುತ್ತೀರಾ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಆಂಜನೇಯ ಮಂತ್ರ ಪಠಿಸಿ.

ಕಟಕ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನದಲ್ಲಿ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ವೃತ್ತಿರಂಗದಲ್ಲಿ ನೀವು ಪಾಲಿಸಿಕೊಂಡು ಬರುತ್ತಿರುವ ನಿಷ್ಠೆ ನಿಮ್ಮನ್ನ ಕಾಪಾಡಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಮನಸ್ಸಿಗೆ ನೆಮ್ಮದಿ ಇದೆ.

ಸಿಂಹ : ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸೋದು ಅತ್ಯಗತ್ಯ. ಹೊಸ ಉದ್ಯಮಗಳಿಗೆ ಬಂಡವಾಳ ಹೂಡಿಕೆ ಮಾಡಲು ಇದು ಸಕಾಲವಲ್ಲ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಗಿಟ್ಟಿಸಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಶುಭ ವಾರ್ತೆ ಕಾದಿದೆ.

ಕನ್ಯಾ : ದಾಂಪತ್ಯ ಜೀವನದಲ್ಲಿ ಇದ್ದ ಕಲಹಗಳು ದೂರಾಗಿ ನೆಮ್ಮದಿ ನೆಲೆಸಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಕಾದಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ.

ತುಲಾ : ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಗಿಟ್ಟಿಸುವ ಕೆಲಸವನ್ನ ನೀವು ಮಾಡಲಿದ್ದೀರಿ. ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ಮಾಡಲಿದ್ದೀರಿ.

ಶುಕ್ರವಾರ ರಾತ್ರಿ ಈ ಕೆಲಸ ಮಾಡಿ ಯಶಸ್ಸು ನಿಮ್ಮದಾಗಿಸಿಕೊಳ್ಳಿ

ವೃಶ್ಚಿಕ: ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡಲಿದ್ದೀರಿ. ಮನೆಯ ಕಿರಿಯ ಸದಸ್ಯರಿಂದ ಶುಭ ವಾರ್ತೆಯನ್ನ ಕೇಳುತ್ತೀರಾ. ದೂರ ಪ್ರಯಾಣ ಮಾಡೋದು ಒಳ್ಳೆಯದಲ್ಲ. ಆದ್ದರಿಂದ ಜಾಗರೂಕರಾಗಿರಿ. ಶೀತ, ಜ್ವರದಂತಹ ಸಮಸ್ಯೆ ನಿಮ್ಮನ್ನ ಕಾಡಬಹುದು.

ಧನು : ಲಾಟರಿ ವ್ಯವಹಾರದಲ್ಲಿ ಇಳಿದು ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಕುಂಠಿತವಾಗಿರಲಿದೆ. ವೃತ್ತಿರಂಗದಲ್ಲಿ ಬಡ್ತಿ ಸಿಕ್ಕರೂ ಸಹ ನೆಮ್ಮದಿ ಇರೋದಿಲ್ಲ. ಸಂಗಾತಿಯ ಸಲಹೆಯನ್ನ ಸ್ವೀಕಾರ ಮಾಡಿ. ವಿದ್ಯಾರ್ಥಿಗಳಿಗೆ ಇದು ಸಾಮಾನ್ಯ ದಿನವಾಗಿರಲಿದೆ.

ತಾಯಿ ಲಕ್ಷ್ಮಿ ಕೃಪೆ ನಿಮ್ಮ ಮೇಲಿರಬೇಕೆಂದ್ರೆ ಹೀಗೆ ಮಾಡಬೇಡಿ

ಮಕರ: ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಜವಳಿ ಉದ್ಯಮಿಗಳಿಗೆ ಲಾಭ ಕಾದಿದೆ. ರಾಜಕೀಯ ರಂಗದವರು ಕೊಂಚ ಕಿರಿಕಿರಿ ಅನುಭವಿಸಲಿದ್ದೀರಿ. ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ.

ಕುಂಭ : ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗೋದ್ರಿಂದ ನಿಮ್ಮ ದಿನ ಆತಂಕದಲ್ಲಿಯೇ ಸಾಗಲಿದೆ. ಪ್ರೇಮ ಪ್ರಕರಣ ಬಯಲಾಗೋದ್ರಿಂದ ಮನೆಯಲ್ಲಿ ದೊಡ್ಡ ರಾದ್ಧಾಂತವೇ ಆಗಬಹುದು. ಖರ್ಚಿನಲ್ಲಿ ಹಿಡಿತ ಇರಲಿ.

ಮೀನ : ಕುಟುಂಬದಲ್ಲಿ ಅಸಮಾಧಾನದ ವಾತಾವರಣ ಉಂಟಾಗಲಿದೆ. ಆರ್ಥಿಕವಾಗಿ ಅಭಿವೃದ್ಧಿ ಕಾಣಲಿದ್ದೀರಿ. ವೃತ್ತಿರಂಗದಲ್ಲಿ ಹಲವು ಸ್ಪರ್ಧೆಯನ್ನ ಎದುರಿಸಬೇಕಾಗಿ ಬರಬಹುದು. ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ನೀಡಿ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...