alex Certify ಈ ಕಾರಣಕ್ಕೆ ಇನ್ಮುಂದೆ ಕಡಲೆಕಾಯಿ ಮಾರೋದಿಲ್ಲವಂತೆ ‌ʼʼಕಚ್ಚಾ ಬಾದಾಮ್‌ʼʼ ಖ್ಯಾತಿಯ ಭುವನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಇನ್ಮುಂದೆ ಕಡಲೆಕಾಯಿ ಮಾರೋದಿಲ್ಲವಂತೆ ‌ʼʼಕಚ್ಚಾ ಬಾದಾಮ್‌ʼʼ ಖ್ಯಾತಿಯ ಭುವನ್

ಪಶ್ಚಿಮ ಬಂಗಾಳದ ಕಡಲೆಕಾಯಿ ವ್ಯಾಪಾರಿ ಭುವನ್​​ ಬಡ್ಯಾಕರ್​​​ ಹಾಡಿದ ಒಂದೇ ಒಂದು ಹಾಡು ಸೋಶಿಯಲ್​ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಧೂಳೆಬ್ಬಿಸಿತು ಅಂದರೆ ಈ ಹಾಡು ಇದೀಗ ಯುವಜನತೆಯ ಬಾಯಲ್ಲಿ ಗುನುಗುತ್ತಿದೆ. ಯೆಸ್​..! ಕಚ್ಚಾ ಬಾದಾಮ್​ ಎಂಬ ಹಾಡಿನ ಮೂಲಕ ಭುವನ್​ ಬಡ್ಯಾಕರ್​ ಕಡಲೆಕಾಯಿ ಮಾರಾಟದಿಂದ ಇದೀಗ ಕೋಲ್ಕತ್ತಾದ ನೈಟ್​ ಕ್ಲಬ್​ನಲ್ಲಿ ಲೈವ್​ ಪ್ರದರ್ಶನ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.

ನಿಮ್ಮೆಲ್ಲರ ಜೊತೆ ಇಲ್ಲಿರಲು ನನಗೆ ತುಂಬಾನೇ ಸಂತೋಷವಾಗುತ್ತಿದೆ ಎಂದು ಕೋಲ್ಕತ್ತಾದ ನೈಟ್​ ಕ್ಲಬ್​ನಲ್ಲಿ ಭುವನ್​ ಬಡ್ಯಾಕರ್​ ಹೇಳಿದ್ದಾರೆ. ಹೊಳೆಯುವ ಜಾಕೆಟ್​ ಧರಿಸಿದ್ದ ಭುವನ್​, ಕಚ್ಚಾ ಬಾದಾಮ್​​ ಹಾಡನ್ನು ಹಾಡಿದ್ದು ಪ್ರೇಕ್ಷಕರು ಫುಲ್​ ಫಿದಾ ಆಗಿದ್ದಾರೆ.

ಇದೇ ಮೂರು ತಿಂಗಳ ಹಿಂದೆ ಕಡಲೆಕಾಯಿ ಮಾರುತ್ತಾ ಕುಟುಂಬಕ್ಕೆ ಒಂದೊತ್ತಿನ ಊಟವನ್ನು ಹೊಂದಿಸಲು ಪರದಾಡುತ್ತಿದ್ದ ಭುವನ್​ ಬಡ್ಯಾಕರ್​ರ ಜೀವನವೇ ಇದೀಗ ಬದಲಾಗಿ ಹೋಗಿದೆ. ಕಳೆದ ವಾರವಷ್ಟೇ ಮ್ಯೂಸಿಕ್​​ ಕಂಪನಿಯೊಂದು ಇವರಿಗೆ 1.5 ಲಕ್ಷ ರೂಪಾಯಿ ಮೌಲ್ಯದ ಚೆಕ್​ ನೀಡಿದೆ.

ಇದು ಮಾತ್ರವಲ್ಲದೇ ಭುವನ್​ ಬಂಗಾಳಿಯ ಪ್ರಸಿದ್ಧ ಟಿವಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಸ್ವತಃ ಸೌರವ್​ ಗಂಗೂಲಿ ನಡೆಸಿಕೊಟ್ಟಿದ್ದರು..!

ನಾನೀಗ ಕಡಲೆಕಾಯಿ ವ್ಯಾಪಾರ ಮಾಡುವುದನ್ನೇ ಬಿಟ್ಟಿದ್ದೇನೆ. ನನ್ನ ನೆರೆಹೊರೆಯವರು ನೀವು ಕಡಲೆಕಾಯಿ ವ್ಯಾಪಾರಕ್ಕೆ ಹೋಗಬೇಡಿ. ಇಲ್ಲವಾದಲ್ಲಿ ನಿಮ್ಮನ್ನು ಯಾರಾದರೂ ಕಿಡ್ನಾಪ್​ ಮಾಡಿಬಿಟ್ಟಾರು ಎಂದು ಹೇಳುತ್ತಾರೆ ಅಂತಾ ಭುಬನ್​ ಹೇಳಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...