alex Certify ಆರ್​ಆರ್​ಆರ್​ ಸಿನಿಮಾ ಬಗ್ಗೆ ಕುತೂಹಲಕಾರಿ ವಿಚಾರ ಹಂಚಿಕೊಂಡ ಎಸ್​.ಎಸ್.​ ರಾಜಮೌಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್​ಆರ್​ಆರ್​ ಸಿನಿಮಾ ಬಗ್ಗೆ ಕುತೂಹಲಕಾರಿ ವಿಚಾರ ಹಂಚಿಕೊಂಡ ಎಸ್​.ಎಸ್.​ ರಾಜಮೌಳಿ

ಆರ್​ಆರ್​ಆರ್​ ಸಿನಿಮಾ ರಿಲೀಸ್​ಗೂ ಮುನ್ನವೇ ಸಾಕಷ್ಟು ವಿಚಾರಗಳ ಮೂಲಕ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈಗಾಗಲೇ ಸಿನಿಮಾದ ಟ್ರೇಲರ್​, ಟೀಸರ್​ ಹಾಗೂ ಹಾಡುಗಳು ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಮುಂಬೈನಲ್ಲಿ ನಡೆದ ಆರ್​ಆರ್​ಆರ್​ ಪ್ರಿ ರಿಲೀಸ್​ ಸಮಾರಂಭದಲ್ಲಿ ನಿರ್ದೇಶಕ ಎಸ್​.ಎಸ್.​ ರಾಜಮೌಳಿ ಜ್ಯೂನರ್​ ಎನ್​ಟಿಆರ್ ಹಾಗೂ ರಾಮ್​ಚರಣ್​​ರ ಇಂಟ್ರಾಡಕ್ಷನ್​ ಸೀನ್​ ಪ್ರಸ್ತುತಪಡಿಸಿದರು. ಈ ವೇಳೆಯಲ್ಲಿ ಇಬ್ಬರು ನಟರ ಜೊತೆ ಕೆಲಸ ಮಾಡುವ ತಮ್ಮ ಅನುಭವವನ್ನು ಹಂಚಿಕೊಂಡರು. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಸಲ್ಮಾನ್​ ಖಾನ್​ ಭಜರಂಗಿ ಭಾಯಿಜಾನ್​ ಚಿತ್ರದ ಸೀಕ್ವೆಲ್​ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಕರಣ್​ ಜೋಹರ್​ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಎಸ್​.ಎಸ್.​ ರಾಜಮೌಳಿ ಆರ್​ಆರ್​ಆರ್​ ಸಿನಿಮಾದಲ್ಲಿ ಜ್ಯೂನಿಯರ್​ ಎನ್​ಟಿಆರ್​ ಹಾಗೂ ರಾಮ್​ಚರಣ್​​ ಪರಿಚಯದ ದೃಶ್ಯದ ಬಗ್ಗೆ ವಿವರಣೆ ನೀಡಿದರು.

ಚರಣ್​ ಹಾಗೂ ತಾರಕ್​​ರನ್ನು ರಾಮ್​ ಮತ್ತ ಭೀಮ್​ ಎಂದು ಕರೆದ ರಾಜಮೌಳಿ, ಇವರಿಬ್ಬರು ನನ್ನ ಕುಟುಂಬದ ಭಾಗವಾಗಿದ್ದಾರೆ. ನಾವು ಈ ಹಿಂದೆ ಕೂಡ ಸ್ಟಾರ್​ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ಸ್ಟಾರ್​ಡಮ್​ನಿಂದ ನಾನು ಸ್ಟಾರ್​ ನಿರ್ದೇಶಕ ಎಂಬ ಹೆಸರನ್ನು ಪಡೆದಿದ್ದೇನೆ. ಚರಣ್​ ಒಬ್ಬ ಅದ್ಭುತ ನಟ ಆದರೆ ಅವರಿಗೆ ಈ ವಿಚಾರ ತಿಳಿದಿಲ್ಲ. ತಾರಕ್​ ಕೂಡ ಅದ್ಭುತ ನಟ ಆದರೆ ಅವರಿಗೆ ಈ ವಿಚಾರ ತಿಳಿದಿದೆ ಎಂದು ಮಾರ್ಮಿಕವಾಗಿ ಮಾತನಾಡಿದ್ರು.

ಇಂಟ್ರಾಡಕ್ಷನ್​ ಸೀನ್ ಬಗ್ಗೆ ಮಾತನಾಡಿದ ರಾಜಮೌಳಿ, ನಾನು ಈ ದೃಶ್ಯಗಳಿಗಾಗಿ ಇಬ್ಬರಿಗೆ ತುಂಬಾನೇ ತೊಂದರೆ ನೀಡಿದ್ದೇನೆ. ತಾರಕ್​ ಇಂಟ್ರಾಡಕ್ಷನ್​ ಸೀನ್​ಗಾಗಿ ನಾನು ಅವರಿಗೆ ಬುಲ್ಗೇರಿಯಾದ ಕಾಡಿನಲ್ಲಿ ಬರಿಗಾಲಿನಲ್ಲಿ ಓಡುವಂತೆ ಮಾಡಿದ್ದೇನೆ. ಅದೇ ರೀತಿ ಚರಣ್​​ಗೂ ಸಹ ನಾವು ಅವರನ್ನು 2000 ಜನರ ಮಧ್ಯದಲ್ಲಿ ನೂಕಿದ್ದೇವೆ. ಅಲ್ಲಿ ಬೆವರು, ಧೂಳು ಹಾಗೂ ರಕ್ತ ಎಲ್ಲವೂ ಇತ್ತು. ನನ್ನ ಸಿನಿಮಾ ಜೀವನದಲ್ಲೇ ನಾನು ನಿರ್ದೇಶಿಸಿದ ಬೆಸ್ಟ್​ ಸೀನ್​ ಇದೇ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...