alex Certify ಅರಳಿ ಎಲೆ ಕಲಾಕೃತಿಗಳಿಂದ ಜನ ಮೆಚ್ಚುಗೆಗೆ ಪಾತ್ರರಾದ ಅಪರೂಪದ ಕಲಾವಿದ ಶಶಿ ಅಡ್ಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಳಿ ಎಲೆ ಕಲಾಕೃತಿಗಳಿಂದ ಜನ ಮೆಚ್ಚುಗೆಗೆ ಪಾತ್ರರಾದ ಅಪರೂಪದ ಕಲಾವಿದ ಶಶಿ ಅಡ್ಕರ್

ಪರಿಸರದ ಸವಕಳಿ ಮತ್ತು ಮಾಲಿನ್ಯ ಭೂಮಿಗೆ ಕಂಟಕವಾಗಿರುವ ಇಂದಿನ ಯುಗದಲ್ಲಿ ಸುಸ್ಥಿರತೆಯು ಭವಿಷ್ಯವನ್ನು ಸುರಕ್ಷಿತಗೊಳಿಸುವ ಏಕೈಕ ಮಾರ್ಗವಾಗಿದೆ. ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಕಾರ್ಯಕೈಗೊಳ್ಳಬೇಕಿದೆ. ಅದು ವಿಜ್ಞಾನದಿಂದ ಕಲೆಯವರೆಗೂ ಸುಸ್ಥಿರ ಬದುಕಿನ ದಿಕ್ಕಿನ ಪ್ರತಿಯೊಂದು ಪ್ರಯತ್ನವೂ ನಮ್ಮ ನಾಳೆಯನ್ನು ಭದ್ರಪಡಿಸುತ್ತದೆ. ಸುಸ್ಥಿರತೆಯ ಕಲ್ಪನೆಯೊಂದಿಗೆ ತಮ್ಮ ಕಲಾ ಪ್ರಕಾರವನ್ನು ಹೆಚ್ಚು ಜೈವಿಕ ವಿಘಟನೀಯ ರೀತಿಯಲ್ಲಿ ತರುತ್ತಿದ್ದಾರೆ ಶಶಿ ಅಡ್ಕರ್. ಮತ್ತೊಂದು ಮಹತ್ವದ ಸಂಗತಿಯೆಂದರೇ ಪ್ರತಿಭೆಗಳ ಸಂಗಮವಾಗಿರುವ ಇವರು ʼಜೋಷ್‌ʼ ಆಪ್‌ ನ ಸೃಷ್ಟಿಕರ್ತರೂ ಹೌದು.

ಅಡ್ಕಾರ್ ಶಿವರಾಮ ಬಾಲಯ್ಯ ಮತ್ತು ಸರೋಜಿನಿ ದಂಪತಿ ಪುತ್ರರಾದ ಶಶಿ ಅಡ್ಕರ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಡ್ಕಾರ್ ನಲ್ಲಿ, ಪ್ರೌಢಶಾಲೆಯನ್ನು ಜಾಲ್ಸೂರಿನಲ್ಲಿ ಮತ್ತು ಪೂರ್ವ ಪದವಿಯನ್ನು ಎಸ್‌ಎಸ್‌ಪಿ ಕಾಲೇಜು ಸುಬ್ರಹ್ಮಣ್ಯದಲ್ಲಿ ಪೂರೈಸಿದರು. ಕಲಾತ್ಮಕ ವಾತಾವರಣದಲ್ಲಿ ಬೆಳೆದ ಅವರು ಬಾಲ್ಯದಲ್ಲಿ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಕಾರ್ಕಳದ ಸಿಇ ಕಾಮತ್ ಸ್ಕೂಲ್ ಆಫ್ ಆರ್ಟ್‌ನಲ್ಲಿ ಶಿಲ್ಪಕಲೆಯಲ್ಲಿ ವಿಶೇಷವಾಗಿ ತರಬೇತಿ ಪಡೆದರು.

ದಿನಗಳು ಕಳೆದಂತೆ, ತಮ್ಮ ಚಿಕ್ಕಪ್ಪ ಕಲಾನಿಧಿ ಗೋಪಾಡ್ಕರ್ ಅವರೊಂದಿಗೆ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಕಲಾತ್ಮಕ ವೇದಿಕೆಗಳನ್ನು ರಚಿಸುವಲ್ಲಿ ತೊಡಗಿಸಿಕೊಂಡರು. ಅಷ್ಟೇ ಅಲ್ಲ ಮೈಸೂರು ದಸರಾದಲ್ಲಿ ಸತತವಾಗಿ ಮೂಕಿ ಚಿತ್ರಗಳ ನಿರ್ಮಾಣದಲ್ಲೂ ತಮ್ಮನ್ನು ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅವರ ಕೆತ್ತನೆಗಳು ಯಾವುದೇ ಜೈವಿಕ ವಿಘಟನೀಯವಲ್ಲದ ವಸ್ತುಗಳಲ್ಲಿ ಕೆತ್ತಲ್ಪಟ್ಟಿಲ್ಲ, ತರಕಾರಿ, ಎಲೆ ಇತ್ಯಾದಿಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿರುವುದರಿಂದ ಅವರು ಉಳಿದವರಿಗಿಂತ ಭಿನ್ನರಾಗಿದ್ದಾರೆ. ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇಳೆ ಥರ್ಮಾಕೋಲ್‌ನಲ್ಲಿ ಕೆತ್ತಿದ ಸುಬ್ರಹ್ಮಣ್ಯ ಅವರ ತಂಡ ರಚಿಸಿದ ಕಲಾತ್ಮಕ ವಿನ್ಯಾಸಗಳು ಪ್ರೇಕ್ಷಕರನ್ನು ಆಕರ್ಷಿಸಿದ್ದವು.

ಪೀಪಲ್ ಟ್ರೀ ಲೀಫ್ (ಅಶ್ವತ್ಥ ಎಲೆ) ಮೇಲೆ ಮಹನೀಯರ ಚಿತ್ರಗಳನ್ನು ರಚಿಸುವ ಅವರ ವಿಶಿಷ್ಟ ಕಲೆ ಎಲ್ಲರ ಗಮನ ಸೆಳೆದಿದೆ. ಪುನೀತ್ ರಾಜ್‌ಕುಮಾರ್, ಬಸವರಾಜ ಬೊಮ್ಮಾಯಿ, ಬಿಪಿನ್ ರಾವತ್, ಶ್ರೀ ಪೇಜಾವರ ಶ್ರೀಗಳಂತಹ ಸಾಧಕರನ್ನು ಅರಳಿ ಎಲೆಯಲ್ಲಿ ರಚಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವರ್ಷ ಅವರು ಟ್ವಿಟ್ಟರ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಶಶಿ ಅಡ್ಕರ್ ಅವರ ಚಿತ್ರದ ರಚನೆ ಕಂಡು ಸ್ವತಃ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮನಗಲಿದ ಸೇನಾ ನಾಯಕ ಬಿಪಿನ್ ರಾವತ್ ಅವರಿಗೆ ಎಲೆಯ ಮೇಲೆ ಕಲಾಕೃತಿಯ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಶಶಿ ಅವರನ್ನು ಹೊರತುಪಡಿಸಿದರೆ ಅಂತಹ ಕಲೆಗಾರ ಬೇರೆ ಯಾರೂ ಇಲ್ಲ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಐಪಿಎಸ್ ಅಧಿಕಾರಿ ಹೆಚ್.ಜಿ.ಎಸ್. ಧಲಿವಾಲ್ ಮತ್ತು ನಟ ಅನುಪಮ್ ಖೇರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಹಂಚಿಕೊಂಡ ನಂತರ ವೀಡಿಯೊ ಟ್ರೆಂಡಿಂಗ್ ಆಗಿತ್ತು.

ಪೀಪಲ್ ಟ್ರೀ ಎಲೆ(ಅಶ್ವತ್ಥ ಎಲೆ) ಮೇಲೆ ಶ್ರೇಷ್ಠ ಕಲಾ ಸೃಷ್ಟಿಕರ್ತ ಅವರಾಗಿದ್ದಾರೆ. ಅತ್ಯುತ್ತಮ ಕಲಾಕೃತಿಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಅವರಿಂದಲೂ ಮೆಚ್ಚುಗೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...