alex Certify ಅಭಿನಂದಿಸಲು ಮುಗಿಬಿದ್ದ ಅಭಿಮಾನಿಗಳು; ಜನಜಂಗುಳಿ ನಿಯಂತ್ರಿಸಲು ಸಿದ್ಧರಾಮಯ್ಯ ಹರಸಾಹಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿನಂದಿಸಲು ಮುಗಿಬಿದ್ದ ಅಭಿಮಾನಿಗಳು; ಜನಜಂಗುಳಿ ನಿಯಂತ್ರಿಸಲು ಸಿದ್ಧರಾಮಯ್ಯ ಹರಸಾಹಸ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಆಚರಣೆಗೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಅದ್ದೂರಿ ಸಿದ್ಧತೆ ನಡೆದಿದ್ದು, ಲಕ್ಷಾಂತರ ಅಭಿಮಾನಿಗಳು ಕಾರ್ಯಕ್ರಮ ನಡೆಯುತ್ತಿರುವ ಶಾಮನೂರು ಪ್ಯಾಲೇಸ್ ಮೈದಾನಕ್ಕೆ ಈಗಾಗಲೇ ಆಗಮಿಸಿದ್ದಾರೆ.

ಸಿದ್ದರಾಮಯ್ಯನವರು ಸಹ ದಾವಣಗೆರೆಯಲ್ಲಿ ಇದ್ದು, ಅತಿಥಿ ಗೃಹದಿಂದ ಕಾರ್ಯಕ್ರಮ ನಡೆಯುವ ವೇದಿಕೆಗೆ ತೆರಳುವ ವೇಳೆ ಅವರನ್ನು ಅಭಿನಂದಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಹೀಗಾಗಿ ಜನಜಂಗುಳಿಯನ್ನು ನಿಯಂತ್ರಿಸಲು ಸಿದ್ಧರಾಮಯ್ಯ ಹರ ಸಾಹಸಪಟ್ಟಿದ್ದಾರೆ.

ಮೈದಾನದಲ್ಲಿ ನೆರೆದಿರುವ ಸಿದ್ದರಾಮಯ್ಯನವರ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದು ಅವರ ಉತ್ಸಾಹ ಮೇರೆ ಮೀರಿದೆ. ಎಲ್ಲೆಲ್ಲೂ ಸಿದ್ದರಾಮಯ್ಯನವರ ಪರ ಜಯ ಘೋಷಗಳು ಕೇಳಿ ಬರುತ್ತಿದ್ದು, ಕರಿ ಕಂಬಳಿಯನ್ನು ಬೀಸಿ ಕಾರ್ಯಕ್ರಮಕ್ಕೆ ಉತ್ಸಾಹ ತಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...