alex Certify ಅಕ್ರಮವಾಗಿ ಜಿಂಕೆ ಸಾಕುತ್ತಿದ್ದವನ ವಿರುದ್ಧ ಕೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮವಾಗಿ ಜಿಂಕೆ ಸಾಕುತ್ತಿದ್ದವನ ವಿರುದ್ಧ ಕೇಸ್

ಶಿವಮೊಗ್ಗ: ಅಕ್ರಮವಾಗಿ ಜಿಂಕೆ ಸಾಕುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.‌

ಶಿರಾಳಕೊಪ್ಪ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಬಿಲಾಲ್ ಜಿಂಕೆ ಸಾಕುತ್ತಿದ್ದ ಆರೋಪಿ. ಈತ ಶಿಕಾರಿಪುರ ರಸ್ತೆಯ ರೆಹಮಾನಿಯಾ ಸಾಮಿಲ್ ನಲ್ಲಿ ಕಳೆದ ಕೆಲವು ತಿಂಗಳಿನಿಂದ ಅಕ್ರಮವಾಗಿ ಜಿಂಕೆ ಸಾಕುತ್ತಿದ್ದರು ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಶಿರಾಳಕೊಪ್ಪ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಸಾಮಿಲ್ ನಲ್ಲಿ ಅಕ್ರಮವಾಗಿ ಸಾಕಲಾಗುತ್ತಿದ್ದ ಜಿಂಕೆ ವಶ ಪಡಿಸಿಕೊಂಡಿದ್ದಾರೆ.

ಸಾಮಿಲ್ ನಲ್ಲಿದ್ದ ಇಬ್ಬರು ಕೆಲಸಗಾರರಾದ ಜಬೀವುಲ್ಲಾ ಹಾಗೂ ದಸ್ತಗಿರ್ ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಸೈಯದ್ ಬಿಲಾಲ್ ನಾಪತ್ತೆಯಾಗಿದ್ದಾರೆ.

ವನ್ಯಜೀವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...