alex Certify ತಮ್ಮ ಹೆಸರಲ್ಲಿ ಜಮೀನಿಲ್ಲದ ರೈತರಿಗೆ ಬಿಗ್ ಶಾಕ್: 6 ಸಾವಿರ ರೂ. ನೀಡ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಭಾರಿ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಹೆಸರಲ್ಲಿ ಜಮೀನಿಲ್ಲದ ರೈತರಿಗೆ ಬಿಗ್ ಶಾಕ್: 6 ಸಾವಿರ ರೂ. ನೀಡ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಭಾರಿ ಬದಲಾವಣೆ

ನವದೆಹಲಿ: ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಬಹುದೊಡ್ಡ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಸ್ವಂತ ಹೆಸರಲ್ಲಿ ಭೂಮಿ ಹೊಂದಿದ ರೈತರಿಗೆ ಮಾತ್ರ 6,000 ರೂ. ನೀಡಲಾಗುತ್ತದೆ.

ತಮ್ಮ ಹೆಸರಲ್ಲಿ ಜಮೀನು ಹೊಂದಿರುವ ರೈತರಿಗೆ ಮಾತ್ರ 6000 ರೂ. ಸಿಗಲಿದೆ. ಅಂದ ಹಾಗೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಕ್ರಮ ಕೈಗೊಂಡಿದೆ.

ಈಗಿರುವ ಮಾನದಂಡಗಳೊಂದಿಗೆ ತಮ್ಮ ಹೆಸರಲ್ಲಿ ಜಮೀನು ಹೊಂದಿದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6000 ರೂ. ನೀಡಲಾಗುತ್ತದೆ. ರೈತರು ಯೋಜನೆಯ ಪ್ರಯೋಜನ ಪಡೆಯಲು ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡಿಸಿಕೊಳ್ಳಬೇಕು. ಇನ್ನೂ ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡಿಸಿಕೊಳ್ಳದ ರೈತರಿಗೆ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದು ಹೇಳಲಾಗಿದೆ.

ಜಮೀನನ್ನು ಬಾಡಿಗೆ ಪಡೆದು ಉಳುಮೆ ಮಾಡುವವರಿಗೆ, ತಂದೆ ಅಥವಾ ಅಜ್ಜನ ಹೆಸರಲ್ಲಿ ಜಮೀನಿದ್ದು ಮೊಮ್ಮಗ ಉಳುಮೆ ಮಾಡುತ್ತಿದ್ದರೂ ಯೋಜನೆಯ ಪ್ರಯೋಜನ ಸಿಗುವುದಿಲ್ಲ. ತಮ್ಮ ಹೆಸರಲ್ಲಿ ಜಮೀನಿನ ಮಾಲೀಕತ್ವ ಹೊಂದಿರಬೇಕೆಂದು ಹೇಳಲಾಗಿದೆ. ಬಹುತೇಕ ರೈತರು ತಮ್ಮ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಂಡಿಲ್ಲದ ಕಾರಣ ಅವರಿಗೆ ಯೋಜನೆ ಪ್ರಯೋಜನ ಕೈತಪ್ಪಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...