alex Certify ಲಾಕ್ ಡೌನ್ ನಿಂದ ಕೋಟ್ಯಾಂತರ ರೂ. ನಷ್ಟದಲ್ಲಿದೆ ಬನಾರಸಿ ಪಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಿಂದ ಕೋಟ್ಯಾಂತರ ರೂ. ನಷ್ಟದಲ್ಲಿದೆ ಬನಾರಸಿ ಪಾನ್

ಲಾಕ್‌ಡೌನ್ -3 ಅವಧಿ ಪೂರ್ಣಗೊಳ್ಳುವ ಹಂತದಲ್ಲಿದೆ. ಆದರೆ ಮುಂದೇನು ಎಂಬ ಪ್ರಶ್ನೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು. ಲಾಕ್ ಡೌನ್ ಅನೇಕ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತಿದೆ. ಇವುಗಳಲ್ಲಿ ಒಂದು ಪ್ರಸಿದ್ಧ ಬನಾರಸಿ ಪಾನ್ ವ್ಯವಹಾರವಾಗಿದೆ.

ಏಳು ವಾರಗಳ ಲಾಕ್ ಡೌನ್ ನಿಂದಾಗಿ  ಬನಾರಸಿ ಪಾನ್ ವ್ಯವಹಾರದ ಚಿತ್ರಣ ಬದಲಾಗಿದೆ. ಸ್ಪಷ್ಟ ಮಾರ್ಗಸೂಚಿಗಳ ಕೊರತೆಯಿಂದಾಗಿ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಅನುಭವಿಸಿದ ವ್ಯವಹಾರವು ಇನ್ನೂ ಗೊಂದಲಕ್ಕೊಳಗಾಗಿದೆ. ಅನೇಕ ಕೃಷಿ ವ್ಯವಹಾರಕ್ಕೆ ಒಪ್ಪಿಗೆ ನೀಡಲಾಗಿದೆ. ಆದ್ರೆ ಬನಾರಸಿ ಪಾನ್ ವ್ಯವಹಾರಕ್ಕೆ ಸರಿಯಾದ ಮಾರ್ಗಸೂಚಿಯಿಲ್ಲ.

ಪ್ರತಿ ದಿನ 25-30 ಲಕ್ಷ ರೂಪಾಯಿ ನಷ್ಟವಾಗುತ್ತಿದೆ. ಇದನ್ನು ನಂಬಿ ಜೀವನ ಸಾಗಿಸುತ್ತಿರುವವರ ಬದುಕು ಬೀದಿಗೆ ಬರ್ತಿದೆ. ಮಂಡಿಯಲ್ಲಿರುವ ಎಲೆಗಳು ಕೊಳೆಯುತ್ತಿವೆ. ಎಲೆಗಳು ಔಷಧಿ ಗುಣ ಹೊಂದಿದೆ. ತಂಬಾಕು ರಹಿತ ಪಾನ್ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಆದ್ರೆ ಪಾನ್ ಹಾಕಿ ಉಗಿಯುವುದ್ರಿಂದ ಕೊರೊನಾ ಹರಡುತ್ತದೆ ಎಂಬ ಭಯದಿಂದ ಪಾನ್ ಮಾರಾಟವನ್ನು ನಿಷೇಧಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...