ಬೆಂಗಳೂರು: ಲಾಕ್ಡೌನ್ ಜಾರಿ ಮಾಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ವಿವಿಧ ವರ್ಗಗಳಿಗೆ ಎರಡನೇ ಹಂತದ ಪ್ಯಾಕೇಜ್ ಘೋಷಣೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ಧತೆ ಕೈಗೊಂಡಿದ್ದಾರೆ.
ಇಂದು ಇಲ್ಲವೇ ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎರಡನೇ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಕೊರೋನಾನ ಬಿಕ್ಕಟ್ಟನ್ನು ಎದುರಿಸಲು ಮತ್ತು ಆರ್ಥಿಕತೆಗೆ ಚೈತನ್ಯ ನೀಡಲು 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ.
ಈಗಾಗಲೇ ಮೊದಲ ಹಂತದ ಪ್ಯಾಕೇಜ್ ನಲ್ಲಿ ಹಲವು ವರ್ಗದವರಿಗೆ ಕೊಡುಗೆ ನೀಡಿರುವ ಯಡಿಯೂರಪ್ಪ ಇಂದು ಇಲ್ಲವೇ ನಾಳೆ ಸುಮಾರು 700 ಕೋಟಿ ರೂಪಾಯಿ ಮೊತ್ತದ ಎರಡನೇ ಪ್ಯಾಕೇಜ್ ಘೋಷಿಸಲಿದ್ದಾರೆ. ಅಡುಗೆ ಮಾಡುವವರು, ಅಕ್ಕಸಾಲಿಗರು, ಮರಗೆಲಸದವರು ಸೇರಿದಂತೆ ಹಲವು ವರ್ಗದವರಿಗೆ ಪ್ಯಾಕೇಜ್ ನಲ್ಲಿ ಕೊಡುಗೆ ನೀಡುವ ಸಾಧ್ಯತೆ ಇದೆ.