alex Certify NRI ಗಳಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

NRI ಗಳಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಲಾಕ್‌ ಡೌನ್‌ ಕಾರಣಕ್ಕೆ ಭಾರತದಲ್ಲಿ ಸಿಕ್ಕಿ ಬಿದ್ದಿರುವ ಅನಿವಾಸಿ ಭಾರತೀಯರಿಗೆ ಕೇಂದ್ರ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. ದೇಶದಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರ ತೆರಿಗೆ ನಿಯಮಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೊರೊನಾ ಬಿಕ್ಕಟ್ಟಿನಿಂದ ವಿದೇಶದಿಂದ ಭಾರತಕ್ಕೆ ಬಂದ ಎನ್.‌ಆರ್‌.ಐ.ಗಳು ಪ್ರಸ್ತುತ ಇಲ್ಲಿಯೇ ಉಳಿಯಬೇಕಾಗಿದೆ.  ಲಾಕ್‌ಡೌನ್‌ ನಿಂದ ಅವ್ರ ದೇಶಕ್ಕೆ ಮರಳಲು ಸಾಧ್ಯವಾಗ್ತಿಲ್ಲ.

1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ದೇಶದಲ್ಲಿ ದೀರ್ಘಕಾಲ ಉಳಿಯುವುವರನ್ನು ಭಾರತದ ನಿವಾಸಿಗಳನ್ನಾಗಿ ಘೋಷಿಸಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಆತಂಕಕ್ಕೆ ಕಾರಣವಾಗಿತ್ತು. ಆದ್ರೆ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

ಮಾರ್ಚ್ 22ರಿಂದ ಮಾರ್ಚ್ 31ರವರೆಗಿನ ಅವಧಿಯನ್ನು ಲೆಕ್ಕ ಹಾಕದಿರಲು ನಿರ್ಧರಿಸಲಾಗಿದೆ. ಮಾರ್ಚ್ 22, 2020 ರಿಂದ ನಿರ್ಗಮಿಸುವ ಅವಧಿಯವರೆಗೆ ಭಾರತದಲ್ಲಿ ವಾಸಿಸುವ ದಿನಾಂಕವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅನಿವಾಸಿಗಳ ಈ ವಾಸದ ದಿನಗಳನ್ನು ಲೆಕ್ಕಕ್ಕಿಡಲಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...