alex Certify ʼಲಾಕ್​ಡೌನ್ʼ​ ನಿರ್ಧಾರದ ವಿರುದ್ಧ ಕಿಡಿ ಕಾರಿದ ಅಂಬಾನಿ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್​ಡೌನ್ʼ​ ನಿರ್ಧಾರದ ವಿರುದ್ಧ ಕಿಡಿ ಕಾರಿದ ಅಂಬಾನಿ ಪುತ್ರ

ರಿಲಯನ್ಸ್ ಕ್ಯಾಪಿಟಲ್​​ನ ಎಕ್ಸಿಕ್ಯುಟಿವ್​ ಡೈರೆಕ್ಟರ್​​ ಹಾಗೂ ಅನಿಲ್​​ ಅಂಬಾನಿ ಹಿರಿಯ ಪುತ್ರ ಅನ್ಮೋಲ್​ ಅಂಬಾನಿ ಸರ್ಕಾರದ ಲಾಕ್​ಡೌನ್​ ಆದೇಶದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಲಾಕ್​ಡೌನ್​ನಿಂದ ಜನತೆಯ ಆರೋಗ್ಯ ಸುಧಾರಿಸೋದು ಅಷ್ಟರಲ್ಲೇ ಇದೆ. ಇದೊಂದು ಸರ್ಕಾರದ ಅತ್ಯಂತ ಕೆಟ್ಟ ಯೋಜನೆ ಎಂದು ವ್ಯಾಖ್ಯಾನಿಸಿದ್ದಾರೆ.

ಕೊರೊನಾ ಕೇಸ್​ ಹೆಚ್ಚಳ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಆದೇಶ ಜಾರಿಗೆ ತಂದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ ಅನ್ಮೋಲ್​, ಕಲಾವಿದರು ನಟನೆಯನ್ನ ಮಾಡಲು ಅವಕಾಶವಿದೆ, ಕ್ರಿಕೆಟಿಗರು ಕರ್ಫ್ಯೂ ಅವಧಿಯಲ್ಲಿಯೂ ತರಬೇತಿಯನ್ನ ಪಡೆಯಬಹುದು. ವೃತ್ತಿಪರ ನಟರು ತಮ್ಮ ಶೂಟಿಂಗ್​ಗಳನ್ನ ಮುಂದುವರಿಸಬಹುದು. ವೃತ್ತಿಪರ ಕ್ರಿಕೆಟಿಗ ರಾತ್ರಿ ಹೊತ್ತು ಪಂದ್ಯವಾಡಬಹುದು. ವೃತ್ತಿಪರ ರಾಜಕಾರಣಿ ಜನಜಂಗುಳಿಯ ನಡುವೆಯೇ ರ್ಯಾಲಿ ಮಾಡಬಹುದು. ಆದರೆ ಉದ್ಯಮ ಹಾಗೂ ಕೆಲಸ ನಿಮಗೆ ಅಗತ್ಯ ಸೇವೆ ಎಂದು ಪರಿಗಣಿಸಲು ಆಗೋದಿಲ್ಲ ಅಲ್ಲವೇ ಎಂದು ಟ್ವೀಟಾಯಿಸಿದ್ದಾರೆ. ಅನ್ಮೋಲ್ ​ರ ಈ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದಂತೆಯೇ ಅನ್ಮೋಲ್​ ವಿವರವಾದ ಪೋಸ್ಟ್​​ನ್ನು ಶೇರ್​ ಮಾಡಿದ್ದಾರೆ.

ಲಾಕ್​​ಡೌನ್​ ಅನ್ನೋದು ಮಾನವನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಂಪತ್ತನ್ನ ವರ್ಗಾವಣೆ ಮಾಡುವ ಒಂದು ಕೀ ಆಗಿದೆ. ಆದರೆ ಜನರು ಇದನ್ನ ಅಸಮರ್ಥ ಆಡಳಿತ ಎಂದು ಭಾವಿಸ್ತಾ ಇದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ನಷ್ಟವಾಗುತ್ತೆ. ಶ್ರೀಮಂತರಿಗೆ ಲಾಭವಾಗುತ್ತೆ ಎಂದು ಹೇಳಲು ಬರೋದಿಲ್ಲ. ಇ ಕಾಮರ್ಸ್​ಗೆ ಹೆಚ್ಚಿನ ಒತ್ತು ನೀಡಲಾಗುತ್ತೆ. ರೈತನ ಜಾಗವನ್ನ ಕಾರ್ಪೋರೇಟ್​ ಮಾಡಲಾಗ್ತಿದೆ.

ಲಾಕ್​​ಡೌನ್​ಗೂ ಹಾಗೂ ಜನತೆಯ ಆರೋಗ್ಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ನಮ್ಮ ಸಮಾಜದ ಆರ್ಥಿಕತೆಯ ಬೆನ್ನೆಲಬನ್ನ ನಾಶ ಮಾಡುತ್ತೆ. ಕಾರ್ಮಿಕರು, ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ರೆಸ್ಟಾರೆಂಟ್​ಗಳು, ಡಾಬಾಗಳು, ಬಟ್ಟೆ ಅಂಗಡಿ, ಕ್ರೀಡಾ ಸಂಕೀರ್ಣ, ಆಟದ ಮೈದಾನ, ಜಿಮ್​ ಎಲ್ಲವನ್ನ ಮುಚ್ಚುವ ಮೂಲಕ ಆರ್ಥಿಕ ಹೊಡೆತದ ಜೊತೆಗೆ ಆರೋಗ್ಯವನ್ನೂ ನಾಶ ಮಾಡುತ್ತದೆ. ಇದು ಮಾತ್ರವಲ್ಲದೇ ಲಾಕ್​ಡೌನ್​​ ಮಕ್ಕಳ ಮಾನಸಿಕ ಆರೋಗ್ಯವನ್ನೂ ನಾಶ ಮಾಡುತ್ತೆ ಅನ್ನೋದನ್ನೂ ಮರೆಯಬೇಡಿ ಎಂದು ಬರೆದಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...