alex Certify ಪರಿಹಾರ ಪ್ಯಾಕೇಜ್ ಘೋಷಣೆಯಾದ್ರೂ ಚೇತರಿಕೆ ಕಾಣದ ಷೇರುಪೇಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಹಾರ ಪ್ಯಾಕೇಜ್ ಘೋಷಣೆಯಾದ್ರೂ ಚೇತರಿಕೆ ಕಾಣದ ಷೇರುಪೇಟೆ

ಕೊರೊನಾ ಬಿಕ್ಕಟ್ಟಿನ ಆರ್ಥಿಕತೆಯನ್ನು ವೇಗಗೊಳಿಸಲು ಸರ್ಕಾರ 20 ಲಕ್ಷ ಕೋಟಿ‌ ರೂ. ಪ್ಯಾಕೇಜ್ ಘೋಷಿಸಿದೆ. ಪರಿಹಾರ ಪ್ಯಾಕೇಜ್‌ನ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಾರ್ವಜನಿಕರಿಗೆ ನೀಡಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಂಬಂಧಿಸಿದ ಜನರಿಗೆ ಪರಿಹಾರ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ.

ರಿಯಲ್ ಎಸ್ಟೇಟ್, ವಿದ್ಯುತ್ ವಲಯ ಮತ್ತು ಬ್ಯಾಂಕೇತರ ಕಂಪನಿಗಳಿಗೆ ಸಹ ಅನೇಕ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಸರ್ಕಾರ ಈ ಘೋಷಣೆಯ ಮಧ್ಯೆಯೂ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂತೋಷ ಕಂಡು ಬಂದಿಲ್ಲ.  ಆರಂಭಿಕ ವಹಿವಾಟಿನಲ್ಲಿ  ಸೆನ್ಸೆಕ್ಸ್ 600 ಕ್ಕಿಂತಲೂ ಹೆಚ್ಚು ಕುಸಿತ ಕಂಡು 31 ಸಾವಿರದ 400 ಪಾಯಿಂಟ್‌ಗಳಿಗೆ ಇಳಿದಿದೆ. ನಿಫ್ಟಿ ಸುಮಾರು 150 ಪಾಯಿಂಟ್‌ಗಳಷ್ಟು ಇಳಿಕೆ ಕಂಡಿದೆ.

ನಿಫ್ಟಿ 9200 ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸುತ್ತಿದೆ. ಸರ್ಕಾರ ನೇರವಾಗಿ ಪ್ರಯೋಜನಗಳನ್ನು ಒದಗಿಸಬಹುದೆಂದು ಹೂಡಿಕೆದಾರರು ಆಶಿಸುತ್ತಿದ್ದರು. ಆದರೆ ಮೊದಲ ಪರಿಹಾರ ಪ್ಯಾಕೇಜ್‌ನಲ್ಲಿ ವ್ಯಾಪಾರ ಜಗತ್ತು ನೇರವಾಗಿ ಪರಿಹಾರವನ್ನು ಪಡೆಯುತ್ತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...