ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ಕಂಪನಿಗಳು ಇದ್ರ ಪ್ರಯೋಗ ಶುರು ಮಾಡಿವೆ. ಈ ಪಟ್ಟಿಗೆ ಈಗ ಪತಂಜಲಿ ಸೇರಿದೆ.
ಪತಂಜಲಿ ಆಯುರ್ವೇದ ಔಷಧಿಗಳನ್ನು ಸಿದ್ಧಪಡಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಇದಲ್ಲ. ಕೊರೊನಾ ವಿರುದ್ಧದ ಔಷಧಿ ಪ್ರಯೋಗ ನಡೆದಿದೆ ಎಂದು ಕಂಪನಿ ಹೇಳಿದೆ.
ಜೈಪುರ ಹಾಗೂ ಇಂದೋರ್ ನಲ್ಲಿ ಕ್ಲಿನಿಕಲ್ ಪ್ರಯೋಗ ಶುರುವಾಗಿದೆ. ಕೊರೊನಾಗೆ ಲಸಿಕೆ ಕಂಡು ಹಿಡಿದು ಕ್ಲಿನಿಕಲ್ ಪ್ರಯೋಗ ನಡೆಸುತ್ತಿರುವ ದೊಡ್ಡ ಕಂಪನಿಗಳ ಪಟ್ಟಿಗೆ ಈಗ ಪತಂಜಲಿ ಸೇರಿದೆ.
ಯೋಗ ಗುರು ಮತ್ತು ಉದ್ಯಮಿ ಬಾಬಾ ರಾಮದೇವ್ ಅವರು ಸ್ಥಾಪಿಸಿದ ಪತಂಜಲಿ ದೇಶದಲ್ಲಿ ಯಶಸ್ಸು ಸಾಧಿಸಿದೆ. 2019 ರ ಹಣಕಾಸು ವರ್ಷದಲ್ಲಿ ಪತಂಜಲಿ ಆಯುರ್ವೇದ 8,500 ಕೋಟಿ ರೂಪಾಯಿ ವಹಿವಾಟು ನಡೆಸಿದ್ದು, ಕಂಪನಿಯಲ್ಲಿ 50000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.