alex Certify ಪಾರ್ಕ್ ನಲ್ಲಿ ನೃತ್ಯಾಭ್ಯಾಸದ ವೇಳೆ ತೊಂದರೆ ನೀಡಿದವರ ವಿರುದ್ಧ ನಟಿ ಸಂಯುಕ್ತಾ ಹೆಗ್ಡೆ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಕ್ ನಲ್ಲಿ ನೃತ್ಯಾಭ್ಯಾಸದ ವೇಳೆ ತೊಂದರೆ ನೀಡಿದವರ ವಿರುದ್ಧ ನಟಿ ಸಂಯುಕ್ತಾ ಹೆಗ್ಡೆ ದೂರು

ಬೆಂಗಳೂರು: ಅಗರ ಕೆರೆಯ ಉದ್ಯಾನವನದಲ್ಲಿ ನೃತ್ಯಾಭ್ಯಾಸ ಮಾಡುವ ವೇಳೆಯಲ್ಲಿ ಕೆಲವರು ತೊಂದರೆ ಕೊಟ್ಟಿದ್ದಾರೆ ಎಂದು ನಟಿ ಸಂಯುಕ್ತಾ ಹೆಗ್ಡೆ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಗರ ಕೆರೆ ಸಮಿತಿ ಸದಸ್ಯೆ ಕವಿತಾರೆಡ್ಡಿ ಮತ್ತು ಅನಿಲ್ ರೆಡ್ಡಿ ಎಂಬುವರ ವಿರುದ್ಧ ಕೇಸ್ ದಾಖಲಾಗಿದೆ. ಶುಕ್ರವಾರ ಬೆಳಗ್ಗೆ ಸಂಯುಕ್ತಾ ಅಗರ ಕೆರೆ ಉದ್ಯಾನವನದಲ್ಲಿ ನೃತ್ಯಭ್ಯಾಸ ಮಾಡುವ ವೇಳೆ ಕವಿತಾರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತುಂಡು ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಜಗಳವಾಡಿದ್ದಾರೆನ್ನಲಾಗಿದೆ.

ಘಟನೆಯ ಸಂಪೂರ್ಣ ವಿಡಿಯೋ ಮಾಡಿಕೊಂಡ ಸಂಯುಕ್ತಾ ಹೆಗ್ಡೆ ಜಾಲತಾಣದಲ್ಲಿ ಹಾಕಿದ್ದು ಅವರ ಪರವಾಗಿ ಹೆಚ್ಚಿನ ಪ್ರತಿಕ್ರಿಯೆ ಬಂದಿದೆ. ವಿನಾಕಾರಣ ಸಂಯುಕ್ತಾ ಅವರಿಗೆ ತೊಂದರೆ ನೀಡಲಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಎಂ. ಸತೀಶ್ ರೆಡ್ಡಿ, ನಟಿಯ ತೇಜೋವಧೆ ಮಾಡಿ ಕೆಲವರು ಬಿಟ್ಟಿ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ.

ಸರ್ಕಾರ ಕೆರೆ ನಿರ್ವಹಣೆಗೆ ಸಮಿತಿ ರಚಿಸಿಲ್ಲ. ಯಾರನ್ನೂ ನೇಮಕ ಮಾಡಿಲ್ಲ. ಕೆಲವರು ತಮ್ಮದೇ ಕೆರೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಪ್ರಾಣಾಯಾಮ, ಯೋಗ ಮಾಡುವ ಸಂದರ್ಭದಲ್ಲಿ ಉಡುವ ಬಟ್ಟೆಗಳನ್ನೇ ನಟಿ ಸಂಯುಕ್ತಾ ಹೆಗ್ಡೆ ತೊಟ್ಟಿದ್ದಾರೆ. ಅವರು ಅಸಭ್ಯವಾಗಿ ವರ್ತಿಸಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...