alex Certify ಮತ್ತೊಮ್ಮೆ ಪ್ರಸಾರವಾಗಲಿದೆ ರಮಾನಂದ‌ ಸಾಗರ್‌ ಅವರ ʼರಾಮಾಯಣʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ಪ್ರಸಾರವಾಗಲಿದೆ ರಮಾನಂದ‌ ಸಾಗರ್‌ ಅವರ ʼರಾಮಾಯಣʼ

ರಮಾನಂದ ಸಾಗರ್​ ಅವರ ಪ್ರಸಿದ್ಧ ʼರಾಮಾಯಣʼ ಧಾರಾವಾಹಿ ಇದೀಗ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಡೋಕೆ ಸಜ್ಜಾಗಿದೆ. ಈ ಬಗ್ಗೆ ಸೀತಾ ಪಾತ್ರದಲ್ಲಿ ಮಿಂಚಿದ್ದ ದೀಪಿಕಾ ಚಿಖ್ಲಿಯಾ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ವೀಕ್ಷಕರ ಒತ್ತಾಯದ ಮೇರೆಗೆ ಬರೋಬ್ಬರಿ 33 ವರ್ಷಗಳ ಬಳಿಕ ರಾಮಾಯಣವನ್ನ ಡಿಡಿ ನ್ಯಾಷನಲ್​ ಚಾನೆಲ್​ನಲ್ಲಿ ಪ್ರಸಾರ ಮಾಡಲಾಗಿತ್ತು. ಲಾಕ್​ಡೌನ್​ ಸಂದರ್ಭದಲ್ಲಿ ಈ ರಾಮಾಯಣ ಧಾರಾವಾಹಿ ಮರುಪ್ರಸಾರ ಭಾರೀ ಸದ್ದು ಮಾಡಿತ್ತು.

ಈ ಧಾರಾವಾಹಿ ಮೊಟ್ಟ ಮೊದಲ ಬಾರಿಗೆ 1987-1988ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಲಾಕ್​ಡೌನ್​ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ಬಂದೊದಗಿದ ಸಂದರ್ಭದಲ್ಲಿ ಈ ಧಾರಾವಾಹಿಯನ್ನ ಮರು ಪ್ರಸಾರ ಮಾಡಲಾಗಿತ್ತು.

ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ಈ ಸಿಹಿಸುದ್ದಿಯನ್ನ ಬಿಚ್ಚಿಟ್ಟಿರುವ ದೀಪಿಕಾ, ಈ ವರ್ಷವೂ ಕೂಡ ರಾಮಾಯಣ ಕಿರುತೆರೆಯಲ್ಲಿ ಮರುಪ್ರಸಾರವಾಗ್ತಿದೆ ಎಂದು ತಿಳಿಸೋಕೆ ತುಂಬಾನೇ ಖುಷಿಯಾಗ್ತಿದೆ. ಇತಿಹಾಸ ಮತ್ತೊಮ್ಮೆ ಮರುಕಳಿಸುತ್ತಿದೆ. ಈ ಧಾರಾವಾಹಿ ಕೇವಲ ನನಗೊಬ್ಬಳಿಗೆ ಮಾತ್ರವಲ್ಲದೇ ಬಹುತೇಕ ಭಾರತೀಯ ಕುಟುಂಬಗಳ ಜೀವನದ ಭಾಗವಾಗಿದೆ. ನೀವು ಕೂಡ ನಮ್ಮ ಪಂಗಡಕ್ಕೆ ಸೇರಿಕೊಂಡು ರಾಮಾಯಣದಿಂದ ಜ್ಞಾನವನ್ನ ಪಡೆಯೋಣ ಎಂದು ಬರೆದುಕೊಂಡಿದ್ದಾರೆ.

ರಾಮಾಯಣ ಧಾರಾವಾಹಿಯಲ್ಲಿ ಅರುಣ್ ಗೋವಿಲ್​, ದೀಪಿಕಾ ಚಿಖ್ಲಿಯಾ ಹಾಗೂ ಸುನೀಲ್​ ಲಹ್ರಿ ಕ್ರಮವಾಗಿ ರಾಮ, ಸೀತೆ ಹಾಗೂ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ 1987ರ ಕಾಲದ ಈ ಐತಿಹಾಸಿಕ ಶೋ ಸ್ಟಾರ್​ ಭಾರತ್​ ಚಾನೆಲ್​ನಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...