alex Certify ಬೇಡ ಬೇಡ ಅಂದರೂ ಸ್ವಾಮಿ ನನ್ನ ಖಾತೆಗೆ ಹಣ ಹಾಕಿದ್ದರು: ರಾಧಿಕಾ ಕುಮಾರಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಡ ಬೇಡ ಅಂದರೂ ಸ್ವಾಮಿ ನನ್ನ ಖಾತೆಗೆ ಹಣ ಹಾಕಿದ್ದರು: ರಾಧಿಕಾ ಕುಮಾರಸ್ವಾಮಿ

ವಂಚನೆ ಆರೋಪದಡಿಯಲ್ಲಿ ಬಂಧನಕ್ಕೊಳಗಾದ ಯುವರಾಜ್ ‌(ಸ್ವಾಮಿ) ಬಗೆಗಿನ ವ್ಯವಹಾರದ ನಂಟಿನ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಯಾಂಡಲ್​ವುಡ್​ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನನಗೂ ಹಾಗೂ ಬಂಧಿತ ಸ್ವಾಮಿ ನಡುವೆ ಸಿನಿಮಾ ವ್ಯವಹಾರ ಇತ್ತು ಎಂದು ಹೇಳಿದ್ದಾರೆ.

ನಟಿ ಖಾತೆಗೆ ಸ್ವಾಮಿ 1.5 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ತಳ್ಳಿ ಹಾಕಿದ ರಾಧಿಕ ಆತನ ಖಾತೆಯಿಂದ ನನ್ನ ಖಾತೆಗೆ ಬಂದಿದ್ದು ಕೇವಲ 15 ಲಕ್ಷ ರೂಪಾಯಿ ಎಂದು ಹೇಳಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಅವ್ರು, ಪತ್ನಿಯ ಹೆಸರಲ್ಲಿ ಪ್ರಾಡಕ್ಷನ್​ ಹೌಸ್​ ಹೊಂದಿದ್ದ ಸ್ವಾಮಿ ನಮ್ಮ ಬ್ಯಾನರ್​ ಜೊತೆ ಸೇರಿ ಐತಿಹಾಸಿಕ ಸಿನಿಮಾ ಮಾಡುವ ಇರಾದೆ ಹೊಂದಿದ್ದರು ಎಂದಿದ್ದಾರೆ.

ನಾಟ್ಯರಾಣಿ ಶಾಕುಂತಲ ಸಿನಿಮಾಗಾಗಿ ಸ್ವಾಮಿ ನನ್ನ ಬಳಿ ಡೇಟ್ಸ್ ಕೇಳಿದ್ದರು. 90 ದಿನಗಳ ಅವಧಿಗೆ ನನ್ನ ಹಾಗೂ ಸ್ವಾಮಿ ನಡುವೆ ಮಾತಿನ ಅಗ್ರಿಮೆಂಟ್​ ಮಾತ್ರ ಆಗಿತ್ತು. ಅವರು ಏಕಾಏಕಿ ನನ್ನ ಖಾತೆಗೆ ಅಡ್ವಾನ್ಸ್ ರೂಪದಲ್ಲಿ 15 ಲಕ್ಷ ಹಾಕಿಯೇ ಬಿಟ್ಟರು. ಇದಾದ ಬಳಿಕ ಇನ್ನೊಂದು ಖಾತೆಯಿಂದ ನನಗೆ 60 ಲಕ್ಷ ರೂಪಾಯಿ ವರ್ಗಾವಣೆಯಾಗಿತ್ತು. ಇದು ಯಾರದ್ದು ಎಂದು ನಾನು ಕೇಳಿದಾಗ ನನ್ನ ಭಾವ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿದ್ದರು. 90 ದಿನಗಳ ಕಾಲ್​ ಶೀಟ್​ಗೆ ನಾನು 89 ಲಕ್ಷ ರೂಪಾಯಿ ಡಿಮ್ಯಾಂಡ್​ ಮಾಡಿದ್ದೆ ಎಂದು ರಾಧಿಕಾ ಹೇಳಿದ್ದಾರೆ.

ಸಿನಿಮಾ ಅಗ್ರಿಮೆಂಟ್​ ಅಭ್ಯಾಸವನ್ನ ರೂಡಿಸಿಕೊಳ್ಳದ ರಾಧಿಕಾ ಸಾಮಾನ್ಯವಾಗಿ ನಿರ್ಮಾಪಕರ ಬಳಿಕ ಮಾತಿನ ವ್ಯವಹಾರವನ್ನೇ ನಡೆಸುತ್ತಿದ್ದರಂತೆ. ಆದರೆ ಸ್ವಾಮಿ ಪ್ರಕರಣದ ಬಳಿಕ ದೊಡ್ಡ ಪಾಠ ಕಲಿತಿದ್ದು ಇನ್ಮೇಲೆ ಯಾರ ಜೊತೆಯೂ ಅಗ್ರಿಮೆಂಟ್​ ಇಲ್ಲದೇ ವ್ಯವಹಾರ ಮಾಡಲಾರೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...