alex Certify ರಾಧಿಕಾ ಕುಮಾರಸ್ವಾಮಿಗೆ ಅಶುಭ ಘಳಿಗೆ ಕಾದಿದೆ ಎಂದಿದ್ದ ಯುವರಾಜ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಧಿಕಾ ಕುಮಾರಸ್ವಾಮಿಗೆ ಅಶುಭ ಘಳಿಗೆ ಕಾದಿದೆ ಎಂದಿದ್ದ ಯುವರಾಜ್​

ಸ್ಯಾಂಡಲ್​ವುಡ್​ ನಟಿ ರಾಧಿಕಾ ಕುಮಾರಸ್ವಾಮಿ ಯುವರಾಜ್​ ಖಾತೆಯಿಂದ ಹಣ ವರ್ಗಾವಣೆ ಪ್ರಕರಣದಿಂದಾಗಿ ವದಂತಿಗೆ ಸಿಲುಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ರಾಧಿಕಾ, ಯುವರಾಜ್​ ಜೊತೆ ಸಿನಿಮಾ ನಂಟಿನ ಹೊರತಾಗಿ ಮತ್ಯಾವ ವ್ಯವಹಾರವನ್ನೂ ನಾನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ರಾಧಿಕಾ ಕುಮಾರಸ್ವಾಮಿಗೆ ತಂದೆಯ ಕಾಲದಿಂದ ಯುವರಾಜ್​ ಪರಿಚಯ. ರಾಧಿಕಾ ಕುಮಾರಸ್ವಾಮಿ ಕುಟುಂಬ ಯುವರಾಜ್​ ಜೊತೆ 17 ವರ್ಷಗಳ ಒಡನಾಟವನ್ನ ಹೊಂದಿದೆ. ಈ ವಿಚಾರವಾಗಿ ಮಾತನಾಡಿದ ರಾಧಿಕಾ ನನ್ನ ತಂದೆ ಸಾಯುವ ವೇಳೆ ಯುವರಾಜ್​ ನುಡಿದಿದ್ದ ಮಾತುಗಳೆಲ್ಲ ನಿಜವಾಗಿತ್ತು. ಹೀಗಾಗಿ ನನ್ನ ತಾಯಿ ಯುವರಾಜ್​ ನ್ನ ಹೆಚ್ಚಾಗಿ ನಂಬುತ್ತಿದ್ದರು ಎಂದು ಹೇಳಿದ್ದಾರೆ.

ನನ್ನ ತಂದೆ ಬದುಕಿದ್ದಾಗ ಯುವರಾಜ್​ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದರು. ಆತ ಕಷ್ಟದಲ್ಲಿದ್ದಾನೆ, ಆತನಿಗೆ ನಾನು ಹಣ ನೀಡಿದ್ದೇನೆ ಎಂದೆಲ್ಲ ಹೇಳಿದ್ದಾರೆ. ಇದೆಲ್ಲ ವಿಚಾರ ಕೇಳಿದ ನನಗೆ ಯುವರಾಜ್​ ಇಂತಹ ಕೃತ್ಯ ಮಾಡೋ ವ್ಯಕ್ತಿ ಎಂದು ನಾನು ಭಾವಿಸಿಯೇ ಇರಲಿಲ್ಲ ಎಂದು ಆಶ್ಚರ್ಯ ಹೊರಹಾಕಿದ್ದಾರೆ.

ಇನ್ನೂ ವಿಚಿತ್ರ ಅಂದ್ರೆ ಇದೇ ಯುವರಾಜ್,​ ರಾಧಿಕಾ ಕುಮಾರಸ್ವಾಮಿ ನಿಮಗೆ ಡಿಸೆಂಬರ್​ ತಿಂಗಳಿನಿಂದ ಅಶುಭ ಘಳಿಗೆ ಕಾದಿದೆ ಎಂದಿದ್ದರಂತೆ. ಅಲ್ಲದೇ ಫೆಬ್ರವರಿ ಹೊತ್ತಿಗೆ ನಿಮಗೆ ಒಳಿತಾಗುತ್ತೆ ಎಂದೂ ಹೇಳಿದ್ದರಂತೆ. ನನಗೆ ಕೆಟ್ಟದಾಗುತ್ತೆ ಎಂದು ಭವಿಷ್ಯ ನುಡಿದಿದ್ದ ವ್ಯಕ್ತಿಯೇ ನನಗೇ ಕಂಟಕ ಪ್ರಾಯನಾಗ್ತಾನೇ ಎಂದು ಕನಸಲ್ಲೂ ಊಹಿಸಿರಲಿಲ್ಲ ಎಂದು ಸ್ಯಾಂಡಲ್​ವುಡ್​ ಸ್ವೀಟಿ ರಾಧಿಕಾ ಅಚ್ಚರಿ ವ್ಯಕ್ತ ಪಡಿಸಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...