alex Certify ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನವರಸ ನಾಯಕ ಜಗ್ಗೇಶ್ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನವರಸ ನಾಯಕ ಜಗ್ಗೇಶ್ ಟಾಂಗ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಿರಿಯ ನಟ ನವರಸನಾಯಕ ಜಗ್ಗೇಶ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡ ಮುಟ್ಟಿದೆ ಎಂದುಬಿಟ್ಟರೆ ಆತ್ಮದ್ರೋಹ ಆಗಿಬಿಡುತ್ತದೆ. ನಮ್ಮನ್ನು ದಡ ಮುಟ್ಟಿಸಿದ್ದು ಅಂದಿನ ನಿರ್ದೇಶಕರು, ನಿರ್ಮಾಪಕರು, ಮಾಧ್ಯಮ ಮಿತ್ರರು, ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು ಎಂದು ಜಗ್ಗೇಶ್ ಹೇಳಿ ಟಾಂಗ್ ಕೊಟ್ಟಿದ್ದಾರೆ.

ನಿನ್ನೆ ದರ್ಶನ್ ಅವರು ನಿರ್ದೇಶಕರಾದ ‘ಜೋಗಿ’ ಪ್ರೇಮ್ ಮತ್ತು ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದಾರೆ.

ಹಿಂದೆ ದರ್ಶನ್ ಅವರ ಬಗ್ಗೆ ನಿರ್ಮಾಪಕರೊಬ್ಬರ ಬಳಿ ಜಗ್ಗೇಶ್ ಮಾತನಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ಚಿತ್ರೀಕರಣದಲ್ಲಿದ್ದ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿದ್ದರು. ಇದಾದ ನಂತರ ದರ್ಶನ್ ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿ ದೊಡ್ಡತನ ಮೆರೆದಿದ್ದರು. ನಂತರ ಗೊಂದಲಕ್ಕೆ ತೆರೆ ಬಿದ್ದಿತ್ತು.

ಇಂದ್ರಜಿತ್ ಲಂಕೇಶ್, ಉಮಾಪತಿ ಅವರ ಬಗ್ಗೆ ನಿನ್ನೆ ಮಾತನಾಡಿದ ದರ್ಶನ್, ನಾನು ಯಾರಿಗೂ ಆನ್ಸರಬಲ್ ಅಲ್ಲ, ಅಭಿಮಾನಿಗಳಿಗೆ ಮಾತ್ರ ಉತ್ತರಿಸುತ್ತೇನೆ. ಜಗ್ಗೇಶ್ ಅವರಿಗೆ ನನ್ನ ಸೆಲೆಬ್ರಿಟಿಗಳಿಂದಾದ ತೊಂದರೆಗೆ ಕ್ಷಮೆ ಕೇಳಿದೆ. ಪ್ರೂಫ್ ಗಳು ಅಲ್ಲೂ ಇತ್ತು. ಸೀನಿಯರ್ ಎಂದು ಕ್ಷಮೆ ಕೇಳಿದ್ದೆ ಎಂದು ಹೇಳಿದ್ದರು. ಇದಾದ ನಂತರ ಜಗ್ಗೇಶ್ ಪೋಸ್ಟ್ ಹಾಕಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ತುಮಕೂರು ಜಿಲ್ಲೆಯ, ತುರುವೇಕೆರೆ ತಾಲ್ಲೂಕಿನ, ಮಾಯಸಂದ್ರ ಹೋಬಳಿಯ,ಆನಡುಗು ಎಂಬ ಸಣ್ಣ ಗ್ರಾಮದ, ಸಣ್ಣ ಕುಟುಂಬದ, ಹಳ್ಳಿಹುಡುಗ ನಾನು ಈಶ್ವರ್ ಗೌಡ …

Posted by ಜಗ್ಗೇಶ್ ಶಿವಲಿಂಗಪ್ಪ on Saturday, July 17, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...