alex Certify ‘ಶಾಕಿಂಗ್ ನ್ಯೂಸ್’ ಚಿರಂಜೀವಿ ನಿಧನರಾಗಿದ್ದನ್ನು ನಂಬಲು ಸಾಧ್ಯವೇ ಆಗಲಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶಾಕಿಂಗ್ ನ್ಯೂಸ್’ ಚಿರಂಜೀವಿ ನಿಧನರಾಗಿದ್ದನ್ನು ನಂಬಲು ಸಾಧ್ಯವೇ ಆಗಲಿಲ್ಲ

ಬೆಂಗಳೂರು: ಮೊದಲಿಗೆ ನಮ್ಮ ಡ್ರೈವರ್ ಚಿರಂಜೀವಿ ಸರ್ಜಾ ನಿಧನರಾದ ಬಗ್ಗೆ ಹೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ.

ನನಗೆ ತುಂಬಾ ನೋವಾಗಿದೆ. ಅವರ ಮದುವೆ ವಿಚಾರದಲ್ಲಿ ನಾನೇ ಇದ್ದೆ. ಮೇಘನಾ ರಾಜ್ ಅವರನ್ನು ಚಿರು ತುಂಬಾ ಇಷ್ಟಪಟ್ಟು ಮದುವೆಯಾಗಿದ್ದರು. ಸುಂದರರಾಜ್ ಅವರ ಬಳಿ ನಾನೇ ಮಾತನಾಡಿದ್ದೆ. ಮೊನ್ನೆ ಅರ್ಜುನ್ ಸರ್ಜಾ ಅವರೊಂದಿಗೆ ಮಾತನಾಡುವಾಗಲೂ ಇವರ ವಿಚಾರವನ್ನು ಮಾತನಾಡಿದ್ದೆವು. ಈಗ ಚಿರು ನಿಧನರಾಗಿದ್ದಾರೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.

ನಿರ್ಮಾಪಕ ಮುನಿರತ್ನ ಅವರು, ಚಿರಂಜೀವಿ ಸರ್ಜಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ತುಂಬಲಾರದ ನಷ್ಟವಾಗಿದೆ. ಬುಲೆಟ್ ಪ್ರಕಾಶ್ ನಿಧನರಾದ ಬೆನ್ನಲ್ಲೇ ಚಿರಂಜೀವಿ ಸರ್ಜಾ ನಿಧನರಾಗಿರುವುದು ತುಂಬಲಾರದ ನಷ್ಟವೆಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...