alex Certify ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ: ಸಂಕಟದಿಂದ 2 ದಿನ ನ್ಯೂಸ್ ನೋಡಲು ಅಂಜಿದ ಅನುಶ್ರೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ: ಸಂಕಟದಿಂದ 2 ದಿನ ನ್ಯೂಸ್ ನೋಡಲು ಅಂಜಿದ ಅನುಶ್ರೀ

ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಅವರ ಕುಟುಂಬಕ್ಕೆ ಮಾತ್ರವಲ್ಲ, ಕರ್ನಾಟಕಕ್ಕೆ ಆಘಾತ ತಂದಿದೆ. ಖ್ಯಾತ ನಿರೂಪಕಿ ಅನುಶ್ರೀ ಅವರು ಚಿರಂಜೀವಿ ಸರ್ಜಾ ವ್ಯಕ್ತಿತ್ವದ ಬಗ್ಗೆ ಹೇಳಿಕೊಂಡಿದ್ದಾರೆ.

ಎರಡು ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ. ನ್ಯೂಸ್ ನೋಡಲು ಅಂಜಿದೆ. ಚಿರನಿದ್ರೆಗೆ ಜಾರಿದ ಚಿರುವನ್ನು ನೋಡಲು ಆಗದೇ ಈ ರೀತಿ ಮಾಡಿದೆ ಎಂದು ಹೇಳಿದ್ದಾರೆ.

ಸದಾ ನಗುವ ಮತ್ತು ನಗಿಸುವ ಕಿಂಚಿತ್ತು ಕೂಡ ಬೇರೆಯವರ ಬಗ್ಗೆ ಅಸೂಯೆ ಪಡದ ಚಿರುವನ್ನು ಆ ಬಾಕ್ಸ್ ನಲ್ಲಿ ನೋಡಿದಾಗ ವಿವರಿಸಲಾಗದ ಸಂಕಟ ಎಂದು ತಿಳಿಸಿದ್ದಾರೆ.

ಚಿರಂಜೀವಿ ಸರ್ಜಾ ಎಷ್ಟು ಕೂಲ್ ಗೈ ಎನ್ನುವುದು ಗೆಳೆಯರೆಲ್ಲರಿಗೂ ಗೊತ್ತು. ದೇವರೇ ಇನ್ನೆಂದು ಇಂತಹ ಸ್ನೇಹಜೀವಿಯನ್ನು ಇಷ್ಟು ಬೇಗ ಕರೆಯಬೇಡ, ಮೇಘನಾ ಮತ್ತು ಕುಟುಂಬದವರಿಗೆ, ಸ್ನೇಹಿತರಿಗೆ ದೇವರು ಧೈರ್ಯ ಕೊಡಲಿ ಎಂದು ಅನುಶ್ರೀ ಪ್ರಾರ್ಥಿಸಿದ್ದಾರೆ.

View this post on Instagram

ಈ ಎರಡು ದಿನ social media open ಮಾಡಲು ಹಿಂಜರಿದೆ ನ್ಯೂಸ್ ನೋಡಲು ಅಂಜಿದೆ ಕಾರಣ ಚಿರ ನಿದ್ರೆಗೆ ಜಾರಿದ ಚಿರು ನೋಡಲು ಆಗದೆ …ದೇವರ ಆಟ ಬಲ್ಲವರಾರು… ಹೌದು ಆದರೆ ಈ ಆಟಗಾರ ಬಹಳ ಬೇಗ ಅಗಲಿದ …. ಸದಾ ನಗುವ ನಗಿಸುವ…ಕಿಂಚಿತ್ತು ಬೇರೆಯವರ ಬಗ್ಗೆ ಅಸೂಯೆ ಪಡದ ಚಿರುವನ್ನು ಆ ಬಾಕ್ಸ್ ನಲ್ಲಿ ನೋಡಿದಾಗ ವಿವರಿಸಲಾಗದ ಸಂಕಟ …. ಈಗ ಎಲ್ಲೆಡೆ ಹಾಗೆ ಮಾಡಿದ್ದರೆ ಹೀಗೆ ಆಗುತಿತ್ತು ಹೀಗೆ ಮಾಡಬೇಕಿತ್ತು ಅನ್ನೋ ನೂರಾರು ಊಹಾಪೋಹಗಳು …. ಆದರೆ ಅವನನ್ನ ಅರಿತವರು ಈ ಭಾವಚಿತ್ರದಲ್ಲಿರೋ ಗೆಳೆಯರೆಲ್ಲರಿಗೂ ಗೊತ್ತು ಆತ ಎಷ್ಟು cool guy ಅಂತ … ಯಾವ ಕಾರಣಗಳು ಅವನನ್ನ ಮತ್ತೆ ತರಲು ಸಾಧ್ಯವೇ ??? ಅವನ ಆತ್ಮಕ್ಕೆ ಶಾಂತಿ ಸಿಗಲಿ … ಮೇಘನಾ ಹಾಗು ಕುಟುಂಬದವರಿಗೆ ಹಾಗು ಸ್ನೇಹಿತರಿಗೆ ಆ ದೇವರು ಧೈರ್ಯ ಕೊಡಲಿ ದೇವರೇ ಇನ್ನೆಂದು ಇಂತ ಸ್ನೇಹ ಜೀವಿಯನ್ನ ಇಷ್ಟು ಬೇಗ ಕರೆಯಬೇಡ

A post shared by ಅನುಶ್ರೀ Anchor Anushree (@anchor_anushreeofficial) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...