alex Certify ಸಾಯುವ ಮೊದಲು ಮಾದಕ ವಸ್ತು ಮಾರಾಟಗಾರನನ್ನು ಭೇಟಿಯಾಗಿದ್ರಾ ಸುಶಾಂತ್….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಯುವ ಮೊದಲು ಮಾದಕ ವಸ್ತು ಮಾರಾಟಗಾರನನ್ನು ಭೇಟಿಯಾಗಿದ್ರಾ ಸುಶಾಂತ್….?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಹೇಳಿಕೆಗಳನ್ನು ಅನೇಕ ಜನ ನೀಡುತಲೇ ಇದ್ದಾರೆ. ಈಗಾಗಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಸಿಬಿಐ ಕೂಡ ತನಿಖೆಯನ್ನು ಪ್ರಾರಂಭಿಸಿದೆ. ಇದರ ಮಧ್ಯೆ ಸುಶಾಂತ್ ಸಾವಿನ ಮುನ್ನ ಭೇಟಿಯಾಗಿದ್ದವರ ಬಗ್ಗೆ ಹಿರಿಯ ರಾಜಕಾರಣಿ ನೀಡಿದ ಹೇಳಿಕೆ ಚರ್ಚೆಯಾಗುತ್ತಿದೆ.

ಹೌದು, ಸುಶಾಂತ್ ಸಿಂಗ್ ಸಾವಿಗೂ ಮುನ್ನ ದುಬೈನ ಮಾದಕವಸ್ತು ಮಾರಾಟಗಾರ ಅಯಾಶ್ ಖಾನ್‌ನನ್ನು ಭೇಟಿಯಾಗಿದ್ದರು ಎಂದು ಸುಬ್ರಮಣ್ಯಮ್ ಸ್ವಾಮಿ ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದೆ.

ಈತ ಸಾವಿಗೂ ಮುನ್ನ ಮಾದಕವಸ್ತು ಮಾರಾಟಗಾರನನ್ನು ಭೇಟಿಯಾಗಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಸುನಂದಾ ಪುಷ್ಕರ್ ಸಾವಿನ ವಿಚಾರವಾಗಿಯೂ ಹೇಳಿರುವ ಅವರು ಸುನಂದಾ ಪುಷ್ಕರ್ ಮರಣೋತ್ತರ ಪರೀಕ್ಷೆ ನಡೆಸಿದಾಗ ನಿಜಾಂಶ ಗೊತ್ತಾಗಿತ್ತು. ಅದೇ ರೀತಿ ಶ್ರೀದೇವಿ ಹಾಗೂ ಸುಶಾಂತ್ ಸಾವಿನ ವಿಚಾರದಲ್ಲಿ ಹೀಗೆ ಆಗಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...