alex Certify ತಮ್ಮ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೆ ಇಹಲೋಕ ತ್ಯಜಿಸಿದ ನಿರ್ದೇಶಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೆ ಇಹಲೋಕ ತ್ಯಜಿಸಿದ ನಿರ್ದೇಶಕ

ಅವರು, ತಮ್ಮ ಚೊಚ್ಚಲ ಸಿನಿಮಾ ನಿರ್ದೇಶನ ಮಾಡಿ ಅನೇಕ ಕನಸು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ತಮ್ಮ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೇ ಸಾವನ್ನಪ್ಪಿದ್ದಾರೆ. ಹೌದು, ತಮಿಳಿನ ಯುವ ನಿರ್ದೇಶಕ ಅರುಣ್‌ ಪ್ರಶಾಂತ್‌ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಕೊಯಮತ್ತೂರಿನ ಮೆಟ್ಟುಪಾಯಳಂ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅರುಣ್ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಇನ್ನು ಇವರ ಸಾವಿಗೆ ನಿರ್ದೇಶಕರು ಹಾಗೂ ಸಿನಿಮಾ ನಟರು ಸಂತಾಪ ಸೂಚಿಸಿದ್ದಾರೆ. 2.0 ಸಿನಿಮಾ ನಿರ್ದೇಶಕ ಶಂಕರ್ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ ಅರುಣ್. ಹೀಗಾಗಿ ತಮ್ಮ ಶಿಷ್ಯನ ಸಾವಿಗೆ ಟ್ವಿಟ್ಟರ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ ಶಂಕರ್. ಹಾಗೂ ಅವರ ನಡುವೆ ಇದ್ದ ಬಾಂಧವ್ಯದ ಬಗ್ಗೆಯೂ ಹೇಳಿದ್ದಾರೆ.

ಅರುಣ್, 4ಜಿ ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಅದು ಅವರ ನಿರ್ದೇಶನದ ಮೊದಲ ಸಿನಿಮಾವಾಗಿತ್ತು. 2016ರಲ್ಲೇ ಶುರುವಾದ ಈ ಸಿನಿಮಾ ಇನ್ನೂ ತೆರೆಕಂಡಿಲ್ಲ. ಈ ಸಿನಿಮಾ ತೆರೆ ಕಾಣುವ ಮೊದಲೇ ಅರುಣ್ ಸಾವಿಗೀಡಾಗಿದ್ದು ದುರಾದೃಷ್ಟಕರ ಸಂಗತಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...