alex Certify ಕೆ.ಕಲ್ಯಾಣ್ ದಂಪತಿ ಕಲಹ: ಕುಟುಂಬಸ್ಥರಿಂದ ರಾಜಿ ಸಂಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆ.ಕಲ್ಯಾಣ್ ದಂಪತಿ ಕಲಹ: ಕುಟುಂಬಸ್ಥರಿಂದ ರಾಜಿ ಸಂಧಾನ

ಬೆಳಗಾವಿ: ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಹಿನ್ನೆಲೆಯಲ್ಲಿ ಕೆ.ಕಲ್ಯಾಣ್ ಹಾಗೂ ಅಶ್ವಿನಿ ಕುಟುಂಬದವರು ಇಬ್ಬರ ನಡುವೆ ರಾಜಿ ಸಂಧಾನ ಮಾಡುವ ಪ್ರಯತ್ನ ನಡೆಸಿದ್ದಾರೆ.

ಇದಕ್ಕೂ ಮುನ್ನ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಅವರಿಗೆ ಮಾಳ ಮಾರುತಿ ಠಾಣೆಯಲ್ಲಿ ವೈದ್ಯರಿಂದ ಒಂದು ಗಂಟೆ ಕಾಲ ಕೌನ್ಸಲಿಂಗ್ ಮಾಡಲಾಯಿತು. ಬಳಿಕ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಕುಟುಂಬದವರು ದಂಪತಿಗಳಿಬ್ಬರ ರಾಜಿ ಸಂಧಾನ ಸಭೆ ನಡೆಸಿದರು.

ಈ ವೇಳೆ ಕೆ.ಕಲ್ಯಾಣ್ ಹಾಗೂ ಪತ್ನಿ ಅಶ್ವಿನಿ, ಕಲ್ಯಾಣ್ ಅವರ ಅಣ್ಣ-ಅತ್ತಿಗೆ ಮತ್ತು ಅಶ್ವಿನಿ ಅವರ ದೊಡ್ಡಮ್ಮ ಮೊದಲಾದವರು ಉಪಸ್ಥಿತರಿದ್ದರು. ಸಂಧಾನ ಸಭೆ ಬಳಿಕ ಎಲ್ಲವೂ ಚೆನ್ನಾಗೇ ಇದೆ. ಏನೂ ಸಮಸ್ಯೆಯಾಗಿಲ್ಲ ಎಲ್ಲವೂ ಶೀಘ್ರವೇ ಇತ್ಯರ್ಥವಾಗಲಿದೆ ಎಂದು ಕೆ.ಕಲ್ಯಾಣ್ ಅತ್ತಿಗೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...