alex Certify ಈ ಮಗು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕ್ಕೇ ಸ್ಪೆಷಲ್ ಎಂದ ಐಶ್ವರ್ಯಾ ಅರ್ಜುನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಗು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕ್ಕೇ ಸ್ಪೆಷಲ್ ಎಂದ ಐಶ್ವರ್ಯಾ ಅರ್ಜುನ್

ಬೆಂಗಳೂರು: ಮೇಘನಾ ಮಗ ತುಂಬಾ ಕ್ಯೂಟ್ ಆಗಿದ್ದಾನೆ. ಚಿರಂಜೀವಿ ತರಾನೇ ಇದ್ದಾನೆ. ಮಗುವಿನ ಮೂಗಂತು ಸೇಮ್ ಚಿರು ಮೂಗಿನಂತೆಯೇ ಇದೆ ಎಂದು ಅರ್ಜುನ್ ಸರ್ಜಾ ಪುತ್ರಿ, ನಟಿ ಐಶ್ವರ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಮೇಘನಾ ರಾಜ್ ಡಿಲೆವರಿ ಬಳಿಕ ಇದೀಗ ಅರ್ಜುನ್ ಸರ್ಜಾ ಕುಟುಂಬ ಆಸ್ಪತ್ರೆಗೆ ಭೇಟಿ ನೀಡಿ, ಜೂನಿಯರ್ ಚಿರುವನ್ನು ನೋಡಿ ಸಂಭ್ರಮ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ನಟಿ ಐಶ್ವರ್ಯಾ ಅರ್ಜುನ್, ಮಗು ಥೇಟ್ ಚಿರು ತರಾನೇ ಇದ್ದಾನೆ. ನಮಗೆ ತುಂಬಾ ಖುಷಿಯಾಯಿತು. ಈ ಸಂತಸದ ಅನುಭವವನ್ನು ಮಾತುಗಳಿಂದ ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ಮಗು ನೋಡಿ ನಿಜಕ್ಕೂ ಸಂತೋಷವಾಯಿತು. ಆದರೆ ಈ ವೇಳೆ ಚಿರು ನೆನಪು ಸಹ ಬರುತ್ತಿದೆ ಎಂದರು.

ಮೇಘನಾಗೆ ಗಂಡು ಮಗುವಾಗುತ್ತೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ನನಗೆ ಒಮ್ಮೊಮ್ಮೆ ಹೆಣ್ಣು ಮಗುವಾಗಬಹುದೇನೋ ಅನಿಸುತ್ತಿತ್ತು. ಎಲ್ಲರ ನಿರೀಕ್ಷೆಯಂತೆ ಗಂಡು ಮಗುವಾಗಿದೆ. ತುಂಬಾ ಖುಷಿಯಾಗುತ್ತೆ. ಈ ಮಗು ನಮ್ಮ ಕುಟುಂಬಕ್ಕೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೇ ತುಂಬಾ ವಿಶೇಷ. ನಮ್ಮ ಪ್ರೀತಿ ಮಾತ್ರವಲ್ಲ ಇಡೀ ಕರ್ನಾಟಕದ ಜನರ ಪ್ರೀತಿ, ಆಶೀರ್ವಾದ ಮಗುವಿನ ಮೇಲಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...