alex Certify ಮದುವೆಯಾಗದೇ ಮಗು ಕೊಟ್ಟ ವ್ಯಕ್ತಿಯಿಂದ ತಡರಾತ್ರಿ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗದೇ ಮಗು ಕೊಟ್ಟ ವ್ಯಕ್ತಿಯಿಂದ ತಡರಾತ್ರಿ ಘೋರ ಕೃತ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಘೋರ ಕೃತ್ಯವೆಸಗಿದ್ದಾನೆ. ಪ್ರಿಯತಮೆ ಮತ್ತು ಆಕೆಯ ತಾಯಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ಒರಿಸ್ಸಾ ಮೂಲದ ಮಲಯ ಫರೀದ್ ಇಂತಹ ಕೃತ್ಯ ಎಸಗಿದ ಆರೋಪಿ. ರಮಾದೇವಿ(30) ಮತ್ತು ಆಕೆಯ ತಾಯಿ ಲಕ್ಷ್ಮೀದೇವಿ(50) ಮೃತಪಟ್ಟವರು ಎಂದು ಹೇಳಲಾಗಿದೆ. ಮಲಯ ಫರೀದ್ ಮತ್ತು ರಮಾದೇವಿ ಮದುವೆಯಾಗದೆ ಒಟ್ಟಿಗೆ ವಾಸವಾಗಿದ್ದರು. ಅವರಿಗೆ ಐದು ತಿಂಗಳ ಹಿಂದೆ ಮಗು ಜನಿಸಿದ್ದು, ಮಗಳಿಗೆ ಮಲಯ ಫರೀದ್ ಕೈಕೊಡುತ್ತಾನೆ ಎಂಬ ಆತಂಕದಲ್ಲಿದ್ದ ಲಕ್ಷ್ಮೀದೇವಿ ಮದುವೆಯಾಗುವಂತೆ ಆತನಿಗೆ ಪೀಡಿಸುತ್ತಿದ್ದಳು.

ನಿನ್ನೆ ರಾತ್ರಿ ಕೂಡ ಮಗಳನ್ನು ಮದುವೆಯಾಗು ಎಂದು ಲಕ್ಷ್ಮಿದೇವಿ ಹೇಳಿದ್ದು, ಈ ವಿಚಾರಕ್ಕೆ ಗಲಾಟೆಯಾಗಿ ಮಧ್ಯರಾತ್ರಿ ಅತ್ತೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮಲಗಿದ್ದ ರಮಾದೇವಿಗೆ ವಿಷಯ ತಿಳಿಸಿದ್ದು ಆಕೆ ಗಾಬರಿಗೊಂಡು ಕಿರುಚಾಡಿದಾಗ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಮಗುವಿನೊಂದಿಗೆ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...