alex Certify ಪುಟ್ಟ ಕಂದನ ಎದುರೇ ನದಿಗೆ ಹಾರಿದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಕಂದನ ಎದುರೇ ನದಿಗೆ ಹಾರಿದ ದಂಪತಿ

ಮಂಗಳವಾರದಂದು ಆಲ್ದೂರು ಗ್ರಾಮದ ನಿವಾಸಿ ಪೂರ್ಣಿಮಾ ಎಂಬ ಗೃಹಿಣಿ ನೀರಿಗೆ ಹಾರಿದ್ದರು. ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಪತಿ ಕೆಂಪಣ್ಣ ಕೂಡ ನೀರಿಗೆ ಹಾರಿದ್ದಾರೆ. ಆದರೆ ಇಬ್ಬರು ನೀರುಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದುರಾದೃಷ್ಟ ಎಂಬಂತೆ ಇವರಿಬ್ಬರ ಜಗಳಕ್ಕೆ ಮೂರು ವರ್ಷದ ಮಗು ಅನಾಥವಾಗಿದೆ.

ಹೌದು, ಗಂಡ – ಹೆಂಡತಿ ಜಗಳದಲ್ಲಿ ಮಗು ಅನಾಥವಾಗಿದೆ. ತವರು ಮನೆಯಿಂದ ದೇಮಹಳ್ಳಿಗೆ ವಾಪಸ್ಸಾಗುವ ವೇಳೆ ಕೆಂಪಣ್ಣ ಹಾಗೂ ಪೂರ್ಣಿಮಾ ನಡುವೆ ಯಾವುದೋ ಕಾರಣಕ್ಕೆ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಪೂರ್ಣಿಮಾ ಬೈಕ್ ನಿಲ್ಲಿಸುವಂತೆ ಪತಿಗೆ ಹೇಳಿದ್ದಾಳೆ. ಈ ವೇಳೆ ಪಕ್ಕದಲ್ಲಿಯೇ ಇದ್ದ ಕಬಿನಿ ನಾಲೆಗೆ ಹಾರಿದ್ದಾರೆ. ಪತ್ನಿಯನ್ನು ಕಾಪಾಡಲು ಹೋಗಿ ಕೆಂಪಣ್ಣ ಕೂಡ ನೀರಿಗೆ ಹಾರಿದ್ದಾರೆ. ದಂಪತಿಯ ಮೂರು ವರ್ಷದ ಕಂದ ಘಟನೆಯ ಬಗ್ಗೆ ಏನೂ ಅರಿವಿಲ್ಲದೆ ಅಪ್ಪ-ಅಮ್ಮ ಬರುತ್ತಾರೆ ಎಂದುಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...