alex Certify ಮುಂಬೈ ಸೀನಿಯರ್ ತಂಡಕ್ಕೆ ಕಾಲಿಟ್ಟ ಬಳಿಕ ಮೊದಲ ವಿಕೆಟ್ ಪಡೆದ ಸಚಿನ್ ಪುತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಸೀನಿಯರ್ ತಂಡಕ್ಕೆ ಕಾಲಿಟ್ಟ ಬಳಿಕ ಮೊದಲ ವಿಕೆಟ್ ಪಡೆದ ಸಚಿನ್ ಪುತ್ರ…!

ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್‌ ಪುತ್ರ ಅರ್ಜುನ್ ತೆಂಡೂಲ್ಕರ್‌ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಸೀನಿಯರ್‌ ಟೀಂನಲ್ಲಿ ದೇಶೀ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಮುಂಬಯಿ ಪರವಾಗಿ ಆಡುತ್ತಿರುವ ಅರ್ಜುನ್, ಹರಿಯಾಣಾ ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ಪಂದ್ಯದಲ್ಲಿ ಮುಂಬಯಿ ಸೋತರೂ ಸಹ ಅರ್ಜುನ್‌ ಪಾಲಿಗೆ ಈ ಮ್ಯಾಚ್‌ ಸ್ಮರಣೀಯವಾಗಿದೆ.

ಎಡಗೈ ವೇಗಿಯಾಗಿರುವ ಅರ್ಜುನ್ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಕೆಲ ಕಾಲ ನೆಟ್ಸ್‌ನಲ್ಲಿ ಕಾಲ ಕಳೆದಿದ್ದಾರೆ. ಹರಿಯಾಣಾ ವಿರುದ್ಧದ ಪಂದ್ಯದಲ್ಲಿ ಅವರು ಎದುರಾಳಿ ತಂಡದ ಆರಂಭಿಕ ಸಿ.ಕೆ. ಬಿಷ್ಣೋಯ್‌ ಅವರ ವಿಕೆಟ್ ಪಡೆದಿದ್ದಾರೆ. ಇದುವರೆಗೂ ಏಜ್‌-ಗ್ರೂಪ್ ಟೂರ್ನಿಗಳಲ್ಲಿ ಆಡುತ್ತಿದ್ದ 21 ವರ್ಷದ ಅರ್ಜುನ್ ಇದೇ ಮೊದಲ ಬಾರಿಗೆ ಮುಂಬಯಿಯ ಸೀನಿಯರ್‌ ತಂಡದಲ್ಲಿ ಆಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...