alex Certify ಮೋದಿ ಕಾರ್ಯವೈಖರಿ ಕೊಂಡಾಡಿದ ಪಾಕ್ ಪತ್ರಕರ್ತನಿಂದ ತನ್ನ ದೇಶದ ನಾಯಕರಿಗೆ ಛೀಮಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಕಾರ್ಯವೈಖರಿ ಕೊಂಡಾಡಿದ ಪಾಕ್ ಪತ್ರಕರ್ತನಿಂದ ತನ್ನ ದೇಶದ ನಾಯಕರಿಗೆ ಛೀಮಾರಿ

ನವದೆಹಲಿ: ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತೀಯ ಅಥ್ಲೀಟ್‌ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಧಾನಪಡಿಸಿದ್ದನ್ನು ಪಾಕಿಸ್ತಾನಿ ಪತ್ರಕರ್ತರೊಬ್ಬರು ಕೊಂಡಾಡಿದ್ದು, ತಮ್ಮದೇ ಸರ್ಕಾರ ಮತ್ತು ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬರ್ಮಿಂಗ್‌ ಹ್ಯಾಮ್‌ ನಲ್ಲಿ ನಡೆಯುತ್ತಿರುವ ಕಾಮನ್‌ ವೆಲ್ತ್ ಗೇಮ್ಸ್‌ ನಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯ ಸೆಮಿಫೈನಲ್‌ ನಲ್ಲಿ ಪೂಜಾ ಗೆಹ್ಲೋಟ್ ಕಠಿಣ ಹೋರಾಟ ನಡೆಸಿದರಾದರೂ ಪಂದ್ಯವನ್ನು ಗೆಲ್ಲಲಾಗಲಿಲ್ಲ. ನಂತರ, ಕಣ್ಣೀರು ಹಾಕಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈವೆಂಟ್‌ ನಲ್ಲಿ ತನ್ನ ಗೆಲುವಿನ ನಂತರ ಭಾರತೀಯ ರಾಷ್ಟ್ರಗೀತೆ ನುಡಿಸಬೇಕೆಂದು ಬಯಸಿದ್ದೆ. ಆದರೆ ಅವಳು ಕಂಚಿನ ಪದಕ ಮಾತ್ರ ಪಡೆದೆ. ಇದಕ್ಕಾಗಿ ದೇಶದ ಜನರ ಕ್ಷಮೆಯಾಚಿಸುತ್ತೇನೆ ಎಂದಿದ್ದರು.

ವಿಡಿಯೋದಿಂದ ಅಥ್ಲೀಟ್‌ ಪೂಜಾ ಗೆಹ್ಲೊಟ್ ಬೇಸರವಾಗಿ ನಿರಾಸೆ ಅನುಭವಿಸಿದ್ದನ್ನು ಗಮನಿಸಿದ ಪ್ರಧಾನಿ ಮೋದಿ ಆಕೆಗೆ ಸಾಂತ್ವನ ಹೇಳಿ ಪ್ರೋತ್ಸಾಹಿಸಿದರು. ಪೂಜಾ, ನಿಮ್ಮ ಪದಕವು ಸ್ಪೂರ್ತಿದಾಯಕ ಆಚರಣೆಗಳಿಗೆ ಕರೆ ನೀಡುತ್ತದೆ. ಕ್ಷಮೆ ಕೇಳಬೇಕಿಲ್ಲ. ನಿಮ್ಮ ಜೀವನ ಪಯಣವು ನಮ್ಮನ್ನು ಪ್ರೇರೇಪಿಸುತ್ತದೆ, ನಿಮ್ಮ ಯಶಸ್ಸು ನಮ್ಮನ್ನು ಸಂತೋಷಪಡಿಸುತ್ತದೆ. ನೀವು ಮುಂದೆ ಮಹತ್ತರ ಸಾಧನೆ ಮಾಡುವಿರಿ ಎಂದು ಪೋಸ್ಟ್‌ ಮಾಡಿದ್ದಾರೆ.

ಕಂಚು ಗೆದ್ದು ಬೇಸರಗೊಂಡಿದ್ದ ಅಥ್ಲೀಟ್‌ ಗೆ ಪ್ರಧಾನಿ ಮೋದಿ ಹಾಗೂ ಇತರ ಅನೇಕರು ಪ್ರೋತ್ಸಾಹದಾಯಕ ಪದಗಳನ್ನು ಪೋಸ್ಟ್ ಮಾಡಿದ ಕಾರಣ ಇದು ವೈರಲ್ ಆಯಿತು. ಇನ್ನೂ ಅನೇಕರು ಮೋದಿಯವರ ಬೆಂಬಲದ ಸೂಚಕವನ್ನು ಶ್ಲಾಘಿಸಿದರು.

ಮೋದಿಯವರ ಶೈಲಿಯನ್ನು ನೆರೆಯ ದೇಶದ ನಾಯಕರ ವರ್ತನೆಯೊಂದಿಗೆ ಹೋಲಿಸಿದ ಪಾಕಿಸ್ತಾನಿ ಪತ್ರಕರ್ತ ಶಿರಾಜ್ ಹಸನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತವು ತಮ್ಮ ಅಥ್ಲೀಟ್‌ಗಳನ್ನು ಈ ರೀತಿ ಕಾಣುತ್ತದೆ. ಪೂಜಾ ಗೆಹ್ಲೋಟ್ ಕಂಚು ಗೆದ್ದು, ಚಿನ್ನದ ಪದಕ ಗೆಲ್ಲಲು ಸಾಧ್ಯವಾಗದ ಕಾರಣ ದುಃಖ ವ್ಯಕ್ತಪಡಿಸಿದ್ದಾರೆ. ಅವರಿಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ ಸಮಾಧಾನಪಡಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಅಥವಾ ಅಧ್ಯಕ್ಷರಿಂದ ಇಂತಹ ಸಂದೇಶವನ್ನು ಎಂದಾದರೂ ನೋಡಿದ್ದೀರಾ? ಪಾಕಿಸ್ತಾನದ ಅಥ್ಲೀಟ್‌ ಗಳು ಯಾರು ಎಂದು ಅವರಿಗೆ ತಿಳಿದಿದೆಯೇ? ಎಂದು ಶಿರಾಜ್ ಹಸನ್ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...