alex Certify ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ ಧೋನಿಯ ಬೌದ್ಧ ಸನ್ಯಾಸಿ ಅವತಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ ಧೋನಿಯ ಬೌದ್ಧ ಸನ್ಯಾಸಿ ಅವತಾರ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಲುಕ್ ಸಾಕಷ್ಟು ಚರ್ಚೆಯಾಗ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 14 ಶುರುವಾಗುವ ಮೊದಲೇ ಧೋನಿ ಕೇಶಮುಂಡನ ಮಾಡಿಸಿದ್ದಾರೆ. ಬೌದ್ಧ ಸನ್ಯಾಸಿಗಳ ಅವತಾರದಲ್ಲಿ ಕಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಧೋನಿ ಈ ಲುಕ್ ಐಪಿಎಲ್ ಪ್ರಚಾರಕ್ಕಾಗಿ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಸಾಕಷ್ಟು ಮೇಮೆಗಳು ಹರಿದಾಡ್ತಿವೆ. ಸ್ಟಾರ್ಸ್ ಸ್ಫೋರ್ಟ್ಸ್ ಅಧಿಕೃತ ವೆಬ್ಸೈಟ್ ನಲ್ಲಿ ಜಾಹೀರಾತಿಗೆ ಸಂಬಂಧಿಸಿದ 9 ಸೆಕೆಂಡ್ ಪ್ರೋಮೋವನ್ನು ಹಂಚಿಕೊಂಡಿದೆ. ಈ ಅವತಾರದ ಹಿಂದಿನ ಸತ್ಯವೇನು? ಶೀಘ್ರದಲ್ಲೇ ತಿಳಿಯಲಿದೆ ಎಂದು ಶೀರ್ಷಿಕೆ ಹಾಕಲಾಗಿದೆ.

ಇದಲ್ಲದೆ ಇನ್ನೊಂದು ವಿಡಿಯೋದಲ್ಲಿ ಧೋನಿ, ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ್ದಾರೆ. ಮಕ್ಕಳ ಮುಂದೆ ಧೋನಿ, ಇಂದಿನ ಕಥೆ ದುರಾಸೆ ಬಗ್ಗೆ. ಅದು ಹಿಟ್ ಮ್ಯಾನ್ ರೋಹಿತ್ ಶರ್ಮಾ ಬಗ್ಗೆ ಎನ್ನುತ್ತಿದ್ದಾರೆ. ಒಮ್ಮೆ ಸಿಂಹದ ಬಾಯಿಗೆ ರಕ್ತ ಬಡಿದಿತ್ತು. ಐದು ಬಾರಿ ಗೆದ್ದ ನಂತ್ರವೂ ಅದ್ರ ಹೊಟ್ಟೆ ತುಂಬಲಿಲ್ಲ. ವಿವೋ ಐಪಿಎಲ್‌ ಹೊಸ ಮಂತ್ರವಾಗಿದೆ ಎಂದಿದ್ದಾರೆ.

ಈ ಬಾರಿ ಹಿಟ್ ಮ್ಯಾನ್ ಹ್ಯಾಟ್ರಿಕ್ ಬಾರಿಸುತ್ತಾರಾ ಎಂದು ಮಕ್ಕಳು ಕೇಳುತ್ತಾರೆ. ಯಾರ ಮಂತ್ರವು ಕೆಲಸ ಮಾಡುತ್ತದೆ ಎಂಬುದನ್ನು ಸಮಯ ಮಾತ್ರ ಹೇಳುತ್ತದೆ ಎಂದು ಧೋನಿ ವಿಡಿಯೋದಲ್ಲಿ ಹೇಳುತ್ತಾರೆ. ಚೆನ್ನೈ ತಂಡ ಐಪಿಎಲ್ ತಯಾರಿ ನಡೆಸಿದೆ. ಏಪ್ರಿಲ್ 10 ರಂದು ದೆಹಲಿ ವಿರುದ್ಧ ಚೆನ್ನೈ ತಂಡ ಐಪಿಎಲ್ ನ ಪಯಣ ಶುರು ಮಾಡಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...