alex Certify ದಿಢೀರ್ ವಿದಾಯ ಘೋಷಿಸಿದ್ದರಿಂದ ಬೇಸರದಲ್ಲಿದ್ದ ಧೋನಿ ಅಭಿಮಾನಿಗಳಿಗೆ ʼಬಿಸಿಸಿಐʼ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿಢೀರ್ ವಿದಾಯ ಘೋಷಿಸಿದ್ದರಿಂದ ಬೇಸರದಲ್ಲಿದ್ದ ಧೋನಿ ಅಭಿಮಾನಿಗಳಿಗೆ ʼಬಿಸಿಸಿಐʼ ಗುಡ್ ನ್ಯೂಸ್

ನವದೆಹಲಿ: ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ವಿದಾಯ ಹೇಳಿದ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಗೌರವಾರ್ಥ ಬೀಳ್ಕೊಡುಗೆ ಪಂದ್ಯ ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚಿಂತನೆ ನಡೆಸಿದೆ.

ಧೋನಿ ಅಭಿಮಾನಿಗಳು ವಿದಾಯ ಹೇಳಿದ ನಾಯಕನಿಗೆ ಪಂದ್ಯ ಆಯೋಜಿಸಬೇಕೆಂದು ಒತ್ತಾಯಿಸಿದ್ದರು. ಒಂದು ವಿದಾಯ ಪಂದ್ಯವೂ ಇಲ್ಲದೆ ಧೋನಿ ನಿವೃತ್ತರಾಗಿದ್ದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು. ಐಪಿಎಲ್ ಟೂರ್ನಿ ನಡೆಯುವ ಸಂದರ್ಭದಲ್ಲಿ ಧೋನಿ ಅವರೊಂದಿಗೆ ಸಮಾಲೋಚನೆ ನಡೆಸಿ ವಿದಾಯ ಪಂದ್ಯ ಆಯೋಜಿಸುವ ಬಗ್ಗೆ ಚರ್ಚೆ ನಡೆಸುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸದ್ಯಕ್ಕೆ ಯಾವುದೇ ಅಂತರರಾಷ್ಟ್ರೀಯ ಸರಣಿಗಳು ಇಲ್ಲ. ಐಪಿಎಲ್ ಮುಗಿದ ಬಳಿಕ ಧೋನಿಯವರಿಗೆ ವಿದಾಯ ಪಂದ್ಯ ನಡೆಸುವ ಕುರಿತು ಚರ್ಚೆ ನಡೆಸಲಾಗುವುದು. ಭಾರತ ಕ್ರಿಕೆಟ್ ಗೆ ಧೋನಿ ಅಪಾರ ಸೇವೆ ಸಲ್ಲಿಸಿದ್ದು ಅವರಿಗಾಗಿ ವಿದಾಯ ಪಂದ್ಯ ಆಯೋಜಿಸಬೇಕೆಂಬ ಬಯಕೆಯಿದೆ. ಆದರೆ ಅವರು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ ಟೂರ್ನಿಯ ವೇಳೆ ವಿದಾಯ ಪಂದ್ಯ ನಡೆಸುವ ಕುರಿತು ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...