alex Certify ಧೋನಿ ನಾಯಕತ್ವದ ಬಗ್ಗೆ ಅನುಮಾನ ಬೇಡ: ಗೌತಮ್ ಗಂಭೀರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ನಾಯಕತ್ವದ ಬಗ್ಗೆ ಅನುಮಾನ ಬೇಡ: ಗೌತಮ್ ಗಂಭೀರ್

ಎಂ.ಎಸ್.​ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಐಪಿಎಲ್​ ಸೀಸನ್​ ಬಲಶಾಲಿ ತಂಡದ ಸಾಲಿನಲ್ಲಿ ಗುರುತಿಸಿಕೊಂಡಿತ್ತು. ಆದರೆ ಈ ಬಾರಿ ಮಾತ್ರ ಅಭಿಮಾನಿಗಳ ನಿರೀಕ್ಷೆಗಳನ್ನ ಪೂರೈಸುವಲ್ಲಿ ಚೆನ್ನೈ ತಂಡ ವಿಫಲವಾಗಿದೆ.

ಐಪಿಎಲ್​ 13ನೆ ಆವೃತ್ತಿಯಲ್ಲಿ ಹಿನ್ನಡೆ ಸಾಧಿಸಿರುವ ಸಿಎಸ್​​​ಕೆ ತಂಡದ ವಿಚಾರವಾಗಿ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್​ ಗಂಭೀರ್​ ಧೋನಿ ನಾಯಕತ್ವವನ್ನ ಹಾಡಿ ಹೊಗಳಿದ್ದಾರೆ. ಚೆನ್ನೈ ತಂಡದ ಗೆಲುವಿಗಾಗಿ ಎಂ.ಎಸ್.​ ಧೋನಿ ಹಗಲಿರುಳು ಶ್ರಮ ಪಟ್ಟಿದ್ದಾರೆ ಅಂತಾ ಹೇಳಿದ್ರು.

ಸಿಎಸ್​ಕೆ ತಂಡದ ಹಿನ್ನಡೆ ಜೊತೆಗೆ ಈ ಬಾರಿ ಧೋನಿ ಅವರ ಬ್ಯಾಟಿಂಗ್​ ಫಾರ್ಮ್ ಹಾಗೂ ನಾಯಕತ್ವದ ಬಗ್ಗೆಯೂ ಹಲವಾರು ಸವಾಲುಗಳು ಹುಟ್ಟಿಕೊಂಡಿವೆ. ಧೋನಿ ಈ ಬಾರಿ ಅತ್ಯುತ್ತಮ ಫಿನೀಶರ್ಸ್​ಗಳ ಸ್ಥಾನದಲ್ಲಿ ಗುರುತಿಸದೇ ಕೊಳ್ಳದಿದ್ರೂ ಸಹ ತಂಡಕ್ಕೆ ಧೋನಿ ನೀಡಿದ ಕೊಡುಗೆಯನ್ನ ಮರೆಯುವಂತಿಲ್ಲ. ಕ್ರಿಕೆಟ್​ ಜೀವನದಲ್ಲಿ ಧೋನಿ ಭವಿಷ್ಯದ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲ ಏರ್ಪಟ್ಟಿದೆ. ಆದರೆ ಧೋನಿ ಮುಂದಿನ ಆವೃತ್ತಿಯಲ್ಲಿ ಸಿಎಸ್​ಕೆ ತಂಡ ಮುನ್ನಡೆ ಸಾಧಿಸುವಂತೆ ನೋಡಿಕೊಳ್ತಾರೆ ಎಂಬ ನಂಬಿಕೆ ಇದೆ ಅಂತಾ ಅಭಿಪ್ರಾಯಪಟ್ಟರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...