alex Certify ಹುತಾತ್ಮ ಯೋಧರ ಬಗ್ಗೆ ವ್ಯಂಗ್ಯವಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯನಿಗೆ ‘ಬಿಗ್ ಶಾಕ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುತಾತ್ಮ ಯೋಧರ ಬಗ್ಗೆ ವ್ಯಂಗ್ಯವಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯನಿಗೆ ‘ಬಿಗ್ ಶಾಕ್’

ಪ್ರಧಾನಿ ಮೋದಿ, ಹುತಾತ್ಮ ಯೋಧರ ಕುರಿತಾಗಿ ವ್ಯಂಗ್ಯವಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯ ಡಾ. ಮಧು ತೊಟ್ಟಪ್ಪಿಳ್ಳಿಲ್ ಅವರನ್ನು ಅಮಾನತು ಮಾಡಲಾಗಿದೆ.

ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ದಾಳಿಗೆ ಭಾರತೀಯ ಸೈನಿಕರು ಹುತಾತ್ಮರಾಗಿದ್ದು ಈ ಕುರಿತಾಗಿ ಟ್ವೀಟ್ ಮಾಡಿರುವ ಡಾ.ಮಧು, ಸೈನಿಕರ ಶವ ಪೆಟ್ಟಿಗೆಗಳ ಮೇಲೆಯೂ ಪಿಎಂ ಕೇರ್ಸ್ ಎಂಬ ಸ್ಟಿಕ್ಕರ್ ಇರುತ್ತದೆಯೇ ಎನ್ನುವ ಕುತೂಹಲ ನನಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ, ಪಿಎಂಕೆ ಕೇರ್ಸ್ ಟೀಕಿಸುವ ಭರದಲ್ಲಿ ಹುತಾತ್ಮ ಯೋಧರ ಬಗ್ಗೆ ಮಾತನಾಡಿದ ವೈದ್ಯನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈದ್ಯನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ರಮ ಕೈಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ, ಸಿ.ಎಸ್.ಕೆ. ತಂಡದ ವೈದ್ಯರ ಸ್ಥಾನದಿಂದ ಮಧು ಅವರನ್ನು ಅಮಾನತು ಮಾಡಿದ್ದು,  ಇದೊಂದು ಕೀಳು ಅಭಿರುಚಿಯ ಟ್ವೀಟ್ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...