ಇದೇ ಕಾರಣಕ್ಕೆ ಕಾಂಗರೂ ಆಕೃತಿಯ ಕೇಕ್ ಕತ್ತರಿಸಲು ನಿರಾಕರಿಸಿದರಂತೆ ಅಜಿಂಕ್ಯ ರಹಾನೆ 30-01-2021 3:40PM IST / No Comments / Posted In: Latest News, Sports ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿದ ಬಳಿಕ ತಾಯ್ನಾಡಿಗೆ ಮರಳಿದ ಟೀಂ ಇಂಡಿಯಾ ಆಟಗಾರರಿಗೆ ಭರ್ಜರಿ ಸ್ವಾಗತವೇ ದೊರಕಿತ್ತು . ಅದರಲ್ಲೂ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ಅಜಿಂಕ್ಯ ರಹಾನೆ ಫುಲ್ ಫೇಮಸ್ ಆಗೋದ್ರು. ಮುಂಬೈಗೆ ವಾಪಸ್ಸಾಗಿದ್ದ ರಹಾನೆಗೆ ಕತ್ತರಿಸಲು ತಂದಿದ್ದ ಕೇಕ್ ಮೇಲೆ ಕಾಂಗರೂ ಆಕೃತಿ ಇದೆ ಎಂಬ ಕಾರಣಕ್ಕೆ ಅದನ್ನ ಕತ್ತರಿಸೋಕೆ ರಹಾನೆ ನಿರಾಕರಿಸಿದ್ದರು. ಇದೀಗ ತಮ್ಮ ಈ ನಿರ್ಧಾರದ ಬಗ್ಗೆ ಕಾರಣ ಬಿಚ್ಚಿಟ್ಟಿದ್ದಾರೆ. ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ರಹಾನೆ, ಕಾಂಗರೂ ಆಸ್ಟ್ರೇಲಿಯಾ ಜನರ ರಾಷ್ಟ್ರೀಯ ಪ್ರಾಣಿ. ಹಾಗಾಗಿ ನನಗೆ ಕತ್ತರಿಸೋಕೆ ಇಷ್ಟವಾಗಲಿಲ್ಲ. ನೀವು ವಿಜಯ ಸಾಧಿಸಿರಿ…. ಇಲ್ಲವೇ ಇತಿಹಾಸವನ್ನೇ ಸೃಷ್ಟಿಸಿರಿ….. ಯಾವುದೇ ಸಂದರ್ಭದಲ್ಲೂ ಎದುರಾಳಿಗಳಿಗೆ ಅಗೌರವ ತೋರಿಸಬಾರದು ಎದುರಾಳಿಗಳು ಹಾಗೂ ಅವರ ದೇಶದ ಮೇಲೆ ನಾವು ಗೌರವ ತೋರಿಸಲೇಬೇಕು ಎಂದು ಹೇಳಿದ್ದಾರೆ. Whatever happened is history now, the next series is my only focus now. Whatever happened is history, the next series is my only focus now. Posted by Ajinkya Rahane on Friday, January 29, 2021