alex Certify ಸೋಲಿನ ಹಿಂದಿನ ಕಾರಣ ಬಿಚ್ಚಿಟ್ಟ ದಿನೇಶ್‌ ಕಾರ್ತಿಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಲಿನ ಹಿಂದಿನ ಕಾರಣ ಬಿಚ್ಚಿಟ್ಟ ದಿನೇಶ್‌ ಕಾರ್ತಿಕ್

ಐಪಿಎಲ್ ಧಮಾಕ ಈಗಾಗಲೇ ಶುರುವಾಗಿದೆ. ಕೊರೊನಾ ಮಧ್ಯೆಯೂ ಐಪಿಎಲ್ ಪಂದ್ಯಾವಳಿಗಳು ಪ್ರಾರಂಭವಾಗಿವೆ. ಕ್ರಿಕೆಟ್ ಅಭಿಮಾನಿಗಳಿಗಂತೂ ಪ್ರತಿ‌ದಿನ ಹಬ್ಬವಾಗಿದೆ. ನೆಚ್ಚಿನ ಟೀಮ್ ಗೆಲ್ಲಲಿ ಎಂದು ಎಷ್ಟೋ ಜನ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಟೀಮ್ ಗಳ ಪೈಕಿ ಕೆಕೆಆರ್ ಕೂಡ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ. ಉತ್ತಮ ಆಟವಾಡುತ್ತಾ ಅಭಿಮಾನಿಗಳನ್ನು ರಂಜಿಸಿದ್ದ ಕೆಕೆಆರ್ ನಿನ್ನೆ ಸೋಲನ್ನನುಭವಿಸಿದೆ.

ನಿನ್ನೆ ಮುಂಬೈ ಇಂಡಿಯನ್ಸ್ ಹಾಗೂ ಚಾಂಪಿಯನ್ಸ್ ಕೋಲ್ಕತಾ ನೈಟ್‌ ರೈಡರ್ಸ್ ನಡುವೆ ಪಂದ್ಯ ಏರ್ಪಟ್ಟಿತ್ತು. ಮುಂಬೈ ಇಂಡಿಯನ್ಸ್ 49 ರನ್‌ಗಳ ಮೂಲಕ ಗೆಲುವು ಸಾಧಿಸಿತು. ಉತ್ತಮ ಬೌಲಿಂಗ್ ಮೂಲಕ ಕೆಕೆಆರ್ ತಂಡವನ್ನು ಸೋಲಿಸುವಲ್ಲಿ ಯಶಸ್ಸು ಕಂಡ ಮುಂಬೈ ಇಂಡಿಯನ್ಸ್ ತಂಡ ಗೆಲವು ಪಡೆದು ಬೀಗಿತ್ತು. ಪಂದ್ಯದ ನಂತರ ಕೆಕೆಆರ್ ನಾಯಕ ದಿನೇಶ್‌ ಕಾರ್ತಿಕ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ತಂಡದ ಆಟಗಾರರು ತುಕ್ಕು ಹಿಡಿದಿದ್ದಾರೆ ಎಂದು ಹೇಳುವ ಮೂಲಕ ದಿನೇಶ್ ಕಾರ್ತಿಕ್ ಆಟಗಾರರ ವೈಫಲ್ಯವನ್ನು ಹೇಳಿ ಸೋಲನ್ನು ಒಪ್ಪಿಕೊಂಡರು. ಇದೇ ವೇಳೆ ಮಾತನಾಡಿದ ಅವರು, ನಮ್ಮ ಹುಡುಗರಿಗೆ ಎಲ್ಲಿ ತಪ್ಪಾಗಿದೆ ಎಂಬುದು ಗೊತ್ತಾಗಿದೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ಸರಿಯಾಗಿ ಆಟವಾಡುತ್ತಾರೆ. ಈ ಪಂದ್ಯದ ಬಗ್ಗೆ ನಾನು ಏನನ್ನೂ ವಿಶ್ಲೇಷಣೆ ಮಾಡುವುದಿಲ್ಲ ಎಂದರು. ಇನ್ನು ರೋಹಿತ್ ಶರ್ಮಾ ಕೂಡ ತನ್ನ ಟೀಮ್ ಗೆಲುವಿಗಾಗಿ ಶ್ರಮಿಸಿದರು. ಉತ್ತಮ ಆಟವಾಡಲು ತನ್ನ ಟೀಮ್ ಗೆ ಶಕ್ತಿ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...