ಶನಿವಾರದಂದು ಶಾರ್ಜಾದಲ್ಲಿ ನಡೆದ ಐಪಿಎಲ್ ನ 16ನೇ ಪಂದ್ಯದಲ್ಲಿ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ಶಿಖರ್ ಧವನ್ 26ರನ್ ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್ ನಲ್ಲಿ ಔಟಾದರು. ಆರಂಭಿಕ ಆಟಗಾರ ಪೃಥ್ವಿ ಶಾ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟವಾಡಿದ್ದು, ಪೃಥ್ವಿ ಷಾ 41 ಎಸೆತಗಳಲ್ಲಿ (66) 4 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿ ನಾಗರ್ ಕೋಟಿ ಬೌಲಿಂಗ್ನಲ್ಲಿ ಔಟಾದರು.
ನಂತರ ಬಂದ ರಿಷಬ್ ಪಂತ್ 38ರನ್ ಗಳಿಸಿ ಆ್ಯಂಡ್ರೆ ರಸೆಲ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ನಾಯಕ ಶ್ರೇಯಸ್ ಅಯ್ಯರ್ 38 ಎಸೆತಗಳಲ್ಲಿ (88)ರನ್ ಇವರ ಈ ಸ್ಫೋಟಕ ಇನ್ನಿಂಗ್ಸ್ ನಲ್ಲಿ 7 ಫೋರ್ ಹಾಗೂ 6 ಸಿಕ್ಸರ್ ಗಳಿದ್ದವು. ಕೊನೆಯವರೆಗೂ ಅಜೇಯರಾಗಿ ಉಳಿದಿದ್ದು, ಒಟ್ಟಾರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ವಿಕೆಟ್ ನಷ್ಟಕ್ಕೆ 228ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಕೆಕೆಆರ್ ತಂಡ ಆರಂಭದಲ್ಲಿ ಸುನೀಲ್ ನರೈನ್ ಕೇವಲ 3ರನ್ ಗಳಿಸಿ ಔಟಾದರು. ನಂತರ ಶುಬ್ ಮನ್ ಗಿಲ್ 28 ರನ್ ಗಳಿಸಿ ಅಮಿತ್ ಮಿಶ್ರಾ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಆಂಡ್ರೆ ರಸೆಲ್ 13 ರನ್ ಗಳಿಸಿ ಔಟಾದರು. ಕೆಕೆಆರ್ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದ ನಿತೀಶ್ ರಾಣ 35 ಎಸೆತಗಳಲ್ಲಿ (58)ರನ್ ಗಳಿಸುವ ಮೂಲಕ ಹರ್ಷಲ್ ಪಟೇಲ್ ಬೌಲಿಂಗ್ನಲ್ಲಿ ಔಟಾದರು.
ನಂತರ ನಾಯಕ ದಿನೇಶ್ ಕಾರ್ತಿಕ್ ಕೂಡ 6 ರನ್ ಗಳಿಸಿ ಔಟಾಗಿದ್ದು, ಬಳಿಕ ಬಂದ ಪ್ಯಾಟ್ ಕಮಿನ್ಸ್ 5 ರನ್ ಗಳಿಸಿ ಔಟಾದರು. ಇಯಾನ್ ಮಾರ್ಗನ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು18 ಎಸೆತಗಳಲ್ಲಿ (44)ರನ್ ಗಳಿಸಿ ಕೊನೆಯ ಹಂತದಲ್ಲಿ ಔಟಾದರು. ರಾಹುಲ್ ತ್ರಿಪಾಟಿ ಕೂಡ ಸ್ಟೋಯ್ ನಿಸ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಕೆಕೆಆರ್ ತಂಡ 8 ವಿಕೆಟ್ ನಷ್ಟಕ್ಕೆ 210ರನ್ ಗಳಿಸಿದ್ದು ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 18ರನ್ ಗಳಿಂದ ಜಯ ಸಾಧಿಸಿತು.