alex Certify BREAKING: ರಾಜಕೀಯದಲ್ಲಿ ಶತ್ರುಗಳು ಸಹಜ, ದೂರು ಕೊಟ್ಟವರಿಗೆ ದೇವರಿಂದಲೇ ಉತ್ತರ; ಜಮೀರ್ ಅಹಮ್ಮದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಾಜಕೀಯದಲ್ಲಿ ಶತ್ರುಗಳು ಸಹಜ, ದೂರು ಕೊಟ್ಟವರಿಗೆ ದೇವರಿಂದಲೇ ಉತ್ತರ; ಜಮೀರ್ ಅಹಮ್ಮದ್

ಬೆಂಗಳೂರು: ನನ್ನ ಮನೆಯ ವಿಚಾರವಾಗಿ ಹಲವರು ದೂರು ಕೊಟ್ಟಿದ್ದಾರಂತೆ. ದೂರು ಕೊಟ್ಟವರ ಬಗ್ಗೆ ಕೇಳಿದೆ ಅವರು ಹೇಳಲ್ಲ ಎಂದರು. ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಹೇಳಿದ್ದಾರೆ.

ಎಲ್ಲರಿಗೂ ನನ್ನ ಮೇಲೆ, ನನ್ನ ಮನೆಯ ಮೇಲೆ ಕಣ್ಣು. ದೂರಿನ ಹಿಂದೆ ರಾಜಕೀಯ ಹಿನ್ನೆಲೆ ಇರಬಹುದು. ರಾಜಕೀಯದಲ್ಲಿ ಶತ್ರುಗಳು ಸಹಜ. ದೂರು ನೀಡಿದ್ದು ಒಳ್ಳೆಯದಾಯಿತು. ಇವತ್ತಲ್ಲ ನಾಳೆ ಆಗಬೇಕಿತ್ತು. ದೂರುದಾರರಿಗೆ ನಾನು ಉತ್ತರಿಸುವುದಿಲ್ಲ. ದೇವರೇ ಉತ್ತರಿಸುತ್ತಾನೆ. ನಾನು ಕಳ್ಳತನ, ಲೂಟಿ ಮಾಡಿದ್ದರೆ ತಪ್ಪಾಗುತ್ತದೆ. ನನ್ನ ಸ್ವಂತ ದುಡಿಮೆಯಿಂದ ಸಂಪಾದಿಸಿದ ಹಣದಿಂದ ಮನೆ ನಿರ್ಮಾಣ ಮಾಡಿದ್ದೇನೆ. ಮನೆ ನಿರ್ಮಿಸಲು 7 ವರ್ಷ ತೆಗೆದುಕೊಂಡಿದ್ದೇನೆ. ಅಧಿಕಾರಿಗಳ ನಿರೀಕ್ಷೆಗೆ ತಕ್ಕಂತೆ ಏನೂ ಸಿಕ್ಕಿಲ್ಲ. ಅವರಿಗೆ ನೀಡಿದ ದಾಖಲೆಗಳು ಸರಿ ಇದ್ದ ಕಾರಣ ನಮ್ಮ ಮನೆಯಿಂದ ವಾಪಸ್ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...