alex Certify ವಿಜಯಪುರದಲ್ಲಿ ನಡೀತಾ ಮರ್ಯಾದೆಗೇಡು ಹತ್ಯೆ…? ಯುವಕ ನಿಗೂಢ ನಾಪತ್ತೆ, ಯುವತಿ ಮನೆಯವರ ವಿರುದ್ಧ ಕೊಲೆ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಜಯಪುರದಲ್ಲಿ ನಡೀತಾ ಮರ್ಯಾದೆಗೇಡು ಹತ್ಯೆ…? ಯುವಕ ನಿಗೂಢ ನಾಪತ್ತೆ, ಯುವತಿ ಮನೆಯವರ ವಿರುದ್ಧ ಕೊಲೆ ಆರೋಪ

ವಿಜಯಪುರ:  ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನನ್ನು ಯುವತಿಯ ಕಡೆಯವರು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಯುವತಿ ಪೋಷಕರು ಯುವಕನಿಗೆ ವಾರ್ನಿಂಗ್ ಮಾಡಿದ್ದರು. ಬಳಗಾನೂರು ಗ್ರಾಮದಿಂದ ಯುವಕ ನಾಪತ್ತೆಯಾಗಿದ್ದಾನೆ. ವಿಜಯಪುರ ಜಿಲ್ಲೆ ಆಲಮೇಲ ತಾಲ್ಲೂಕಿನ ಬಳಗಾನೂರ ಗ್ರಾಮದಿಂದ ರವಿ ಎಂಬ ಯುವಕ ನಾಪತ್ತೆಯಾಗಿದ್ದಾನೆ.

ರವಿ ನಾಪತ್ತೆಯಾದ ಹಿನ್ನೆಲೆಯಲ್ಲಿ 112 ಕ್ಕೆ ಯುವತಿ ಕರೆಮಾಡಿ ಪ್ರಿಯಕರ ರವಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾಳೆ. ನನ್ನ ಪೋಷಕರೇ ಕೊಲೆ ಮಾಡಿರಬಹುದೆಂದು ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ. ಯುವಕನ ಪೋಷಕರಿಗೆ, ಪೊಲೀಸರಿಗೆ ರವಿಯ ಪ್ರಿಯತಮೆ ಮಾಹಿತಿ ನೀಡಿದ್ದಾಳೆನ್ನಲಾಗಿದ್ದು, ಯುವಕನ ಪೋಷಕರು ಆಲಮೇಲ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಾಗುತ್ತಿದ್ದಂತೆ ಯುವತಿಯ ಪೋಷಕರು ನಾಪತ್ತೆಯಾಗಿದ್ದಾರೆ.

ಆಲಮೇಲ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಯುವಕನ ಶವ ಸಿಗುವವರೆಗೆ ಕೊಲೆ ಎಂದು ಪರಿಗಣಿಸಲಾಗುವುದಿಲ್ಲ. ಆತನಿಗಾಗಿ ಹುಡುಕಾಟ ನಡೆಸಲಾಗುವುದು. ಯುವತಿ ಮನೆಯವರನ್ನು ಪತ್ತೆ ಮಾಡಿ ವಿಚಾರಣೆ ನಡೆಸಲಾಗುವುದು ಎಂದು ವಿಜಯಪುರ ಜಿಲ್ಲೆ ಆಲಮೇಲ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ರವಿ ಮತ್ತು ಅನ್ಯಕೋಮಿನ ಯುವತಿ 4 ವರ್ಷಗಳಿಂದ ಪ್ರೀತಿಸಿದ್ದು, ಯುವತಿಯ ಪೋಷಕರು ರವಿಗೆ ಹಲವು ಬಾರಿ ವಾರ್ನಿಂಗ್ ಮಾಡಿದ್ದರು. ನಿನ್ನೆ ರವಿಯ ಮೇಲೆ ಹಲ್ಲೆ ಮಾಡಿ ಎಳೆದುಕೊಂಡು ಹೋಗಿದ್ದಾರೆ. ಕೊಲೆ ಮಾಡಿದ್ದಾರೆಯೇ ಎನ್ನುವುದು ಗೊತ್ತಾಗಿಲ್ಲ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...