alex Certify ‘ನಾನು ಸತ್ತಿಲ್ಲ, ಬದುಕಿದ್ದೇನೆ’: ಶೂಟೌಟ್​ ವದಂತಿಗೆ ತೆರೆ ಎಳೆದ ಖ್ಯಾತ ಕುಸ್ತಿಪಟು ನಿಶಾ ದಹಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾನು ಸತ್ತಿಲ್ಲ, ಬದುಕಿದ್ದೇನೆ’: ಶೂಟೌಟ್​ ವದಂತಿಗೆ ತೆರೆ ಎಳೆದ ಖ್ಯಾತ ಕುಸ್ತಿಪಟು ನಿಶಾ ದಹಿಯಾ

ಹರಿಯಾಣದ ಸೋನೆಪತ್​​ನ ಹಲಾಲ್​ಪುರದಲ್ಲಿರುವ ಸುಶೀಲ್​ ಕುಮಾರ್​ ಕುಸ್ತಿ ಅಕಾಡೆಮಿಯಲ್ಲಿ ದುಷ್ಕರ್ಮಿಗಳು ರಾಷ್ಟ್ರ ಮಟ್ಟದ ಕುಸ್ತಿಪಟು ನಿಶಾ ದಹಿಯಾ ಹಾಗೂ ಅವರ ಸಹೋದರನನ್ನು ಕೊಲೆಯಾಗಿದ್ದಾರೆ ಎಂಬ ವದಂತಿಗೆ ಸ್ವತಃ ನಿಶಾ ದಹಿಯಾ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ವಿಡಿಯೋ ರಿಲೀಸ್​ ಮಾಡಿರುವ ನಿಶಾ ದಹಿಯಾ ನನಗೇನು ಆಗಿಲ್ಲ. ನಾನು ಆರಾಮಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ. ಕೆಲ ನಿಮಿಷಗಳ ಹಿಂದಷ್ಟೇ.. ಸುಶೀಲ್​ ಕುಮಾರ್​ ಕುಸ್ತಿ ಅಕಾಡೆಮಿಯಲ್ಲಿ ನಡೆದ ದುಷ್ಕರ್ಮಿಗಳ ದಾಳಿಯಲ್ಲಿ ನಿಶಾ ದಹಿಯಾ ಹಾಗೂ ಅವರ ಸಹೋದರ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ವ್ಯಾಪಕವಾಗಿ ಹರಡಿತ್ತು.

ಶುಕ್ರವಾರದಂದು ನಿಶಾ ದಹಿಯಾ ಯು 23 ವರ್ಲ್ಡ್​ ಚಾಂಪಿಯನ್​ ಶಿಪ್​ನ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಸಂಪಾದಿಸಿದ್ದಾರೆ. ನಿಶಾ ದಹಿಯಾರ ಉತ್ತಮ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ಸೂಚಿಸಿದ್ದರು.

ಈ ಸಂಬಂಧ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ – ಶಿವಾನಿ, ಅಂಜು, ದಿವ್ಯಾ ಹಾಗೂ ನಿಶಾರಿಗೆ ನನ್ನ ಅಭಿನಂದನೆಗಳು. ಬೆಲ್ಗ್ರೇಡ್​​ನ ಕುಸ್ತಿ ಚಾಂಪಿಯನ್​ ಶಿಪ್​ನಲ್ಲಿ ಪದಕವನ್ನು ಸಂಪಾದಿಸಿದ್ದೀರಾ. ನಿಮ್ಮ ಪ್ರದರ್ಶನವು ವಿಶೇಷವಾಗಿತ್ತು ಹಾಗೂ ಭಾರತದಲ್ಲಿ ಕುಸ್ತಿ ಕ್ಷೇತ್ರವನ್ನು ಇನ್ನಷ್ಟು ಪ್ರಸಿದ್ಧಗೊಳಿಸಲು ಮತ್ತಷ್ಟು ಕೊಡುಗೆ ನೀಡೋದಾಗಿ ಬರೆದಿದ್ದರು.

ನಿಶಾ ದಹಿಯಾ 2014ರಲ್ಲಿ ಶ್ರೀನಗರದಲ್ಲಿ ನಡೆದ ಕೆಡೆಟ್​ ರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಸಂಪಾದಿಸಿದ್ದರು. ಮಾರನೇ ವರ್ಷವು ತಮ್ಮ ಈ ಸಾಧನೆಯನ್ನು ಮುಂದುವರಿಸಿದ್ದರು. 2014ರಲ್ಲಿ ಏಷಿಯನ್​ ಚಾಂಪಿಯನ್​ ಶಿಪ್​ನ 49 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಕಬಳಿಸುವ ಮೂಲಕ ಮೊದಲ ಅಂತಾರಾಷ್ಟ್ರೀಯ ಪದಕಕ್ಕೆ ಮುತ್ತಿಟ್ಟಿದ್ದರು. ಮಾರನೇ ವರ್ಷ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. 2015ರ ರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಕಂಚಿನ ಪದಕ ಸಂಪಾದಿಸಿದ ಬಳಿಕ ನಿಶಾ ಮೇಲೆ ಉದ್ದೀಪನ ಮದ್ದು​ ಸೇವನೆ ಆರೋಪ ಸಾಬೀತಾಗಿತ್ತು. ಹೀಗಾಗಿ ಅವರು ನಾಲ್ಕು ವರ್ಷಗಳ ಕಾಲ ನಿಷೇಧಕ್ಕೆ ಒಳಪಡಬೇಕಾಗಿ ಬಂದಿತ್ತು. ಇನ್ನೇನು ರೈಲ್ವೆ ಇಲಾಖೆಯಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಬೇಕಿದ್ದ ನಿಶಾ ಉದ್ದೀಪನ ಮದ್ದು ಸೇವನೆಯಿಂದಾಗಿ ಆ ಅವಕಾಶವನ್ನು ಕಳೆದುಕೊಂಡರು. 2019ರಲ್ಲಿ ಮತ್ತೆ ಕುಸ್ತಿ ಅಖಾಡಕ್ಕೆ ಮರಳಿದ್ದ ನಿಶಾ ಯು 23 ನ್ಯಾಷನಲ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಸಂಪಾದಿಸಿದ್ದಾರೆ.

https://www.instagram.com/p/CWGNBcnJ4iA/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...