alex Certify ಕಾಲ್ಗೆಜ್ಜೆಗಾಗಿ ಮಹಿಳೆಯ ಭೀಕರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲ್ಗೆಜ್ಜೆಗಾಗಿ ಮಹಿಳೆಯ ಭೀಕರ ಹತ್ಯೆ

ಜೈಪುರ: ಅಪರಿಚಿತ ದುಷ್ಕರ್ಮಿಗಳು 55 ವರ್ಷದ ಮಹಿಳೆಯ ಬೆಳ್ಳಿ ಕಾಲ್ಗೆಜ್ಜೆಗಾಗಿ ಆಕೆ ಕುತ್ತಿಗೆ ಹಾಗೂ ಕಾಲನ್ನು ಕತ್ತರಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಗಂಡನ ಚಿತಾಭಸ್ಮ ತಿಂತಾಳೆ ಈ ಮಹಿಳೆ……!

ಮಂಗಳವಾರದಂದು ಜೈಪುರದ ಸಮೀಪದ ಜಮ್ವರಮ್‌ಘರ್ ನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಮಹಿಳೆಯ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ, ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಶವವನ್ನು ನಂತರ ಸ್ಥಳೀಯರು ಖಟೇಪುರ ಗ್ರಾಮದಲ್ಲಿ ಪತ್ತೆ ಮಾಡಿದ್ದಾರೆ.

ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆಕೆಯ ಕಾಲಿನಲ್ಲಿ ಬೆಳ್ಳಿ ಕಾಲ್ಗೆಜ್ಜೆ ಗಮನಿಸಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಪರಾಧಿಗಳನ್ನು ಬೇಟೆಯಾಡಲು ಒಟ್ಟು 400 ಪೊಲೀಸ್ ಸಿಬ್ಬಂದಿಯ 30 ತಂಡಗಳನ್ನು ರಚಿಸಿರುವುದಾಗಿ ಜೈಪುರ ಗ್ರಾಮಾಂತರ ಎಸ್ಪಿ ಶಂಕರ್ ದತ್ ಶರ್ಮಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...