alex Certify ಕುಡಿದು ಬಂದ ವರನನ್ನು ಸ್ಥಳದಲ್ಲೇ ತಿರಸ್ಕರಿಸಿದ ಮದುಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದು ಬಂದ ವರನನ್ನು ಸ್ಥಳದಲ್ಲೇ ತಿರಸ್ಕರಿಸಿದ ಮದುಮಗಳು

ವರ ಹಾಗೂ ಆತನ ಸಹಚರರು ಮದುವೆ ಮನೆಗೆ ಕುಡಿದ ಮತ್ತಿನಲ್ಲಿ ಬಂದರೆಂಬ ಕಾರಣಕ್ಕೆ 22-ವರ್ಷದ ಮದುಮಗಳೊಬ್ಬಳು ಮದುವೆಯನ್ನೇ ರದ್ದು ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ.

ಪ್ರಯಾಗ್‌ರಾಜ್‌ನ ಪ್ರತಾಪ್‌ಘಡ ಪಟ್ಟಣದ ಟಿಕ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುಮಗನ ಮೆರವಣಿಗೆಯಲ್ಲಿ ಬಂದ ಅಷ್ಟೂ ಜನರನ್ನು ಒತ್ತೆಯಾಗಿಟ್ಟುಕೊಂಡ ಹುಡುಗಿಯ ಮನೆಯವರು, ತಾವು ಕೊಟ್ಟಿದ್ದ ಉಡುಗೊರೆಗಳನ್ನೆಲ್ಲಾ ವಾಪಸ್ ಕೇಳಿದ್ದಾರೆ.

ಕುಡಿದ ಮತ್ತಿನಲ್ಲಿ ಮದುವೆಗೆ ಬಂದಿದ್ದಲ್ಲದೇ ಅತಿಥಿಗಳ ಮುಂದೆ ’ಜೈಮಾಲಾ’ ಸಮಾರಂಭದಲ್ಲಿ ನೃತ್ಯ ಮಾಡಲು ವಧುವಿಗೆ ವರ ಬಲವಂತ ಮಾಡಿದ್ದಾನೆ. ಇದಕ್ಕೆ ವಧು ಒಪ್ಪದೇ ಇದ್ದಾಗ ಮದುವೆ ಗಂಡು ರಂಪಾಟ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಮದುವೆ ಹೆಣ್ಣು, ಮದುವೆಯನ್ನೇ ಕ್ಯಾನ್ಸಲ್ ಮಾಡಿ ಎಂದಿದ್ದಾಳೆ.

ಪೊಲೀಸರಿಗೆ ಕರೆ ಮಾಡಿದ ಮದುಮಗನ ಮನೆಮಂದಿ ಹುಡುಗಿಯ ಮನವೊಲಿಸಲು ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಮದುಮಗಳು ಯಾವುದೇ ಕಾರಣಕ್ಕೂ ಸಮ್ಮತಿ ನೀಡಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...