alex Certify ದೇಶದ ಸ್ವಾತಂತ್ರ್ಯವನ್ನು ‘ಭಿಕ್ಷೆ’ ಎಂದ ಕಂಗನಾ ವಿರುದ್ಧ ಭುಗಿಲೆದ್ದ ಆಕ್ರೋಶ: ಪದ್ಮಶ್ರೀ ಹಿಂಪಡೆಯುವಂತೆ ಹೆಚ್ಚಾಯ್ತು ಕೂಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಸ್ವಾತಂತ್ರ್ಯವನ್ನು ‘ಭಿಕ್ಷೆ’ ಎಂದ ಕಂಗನಾ ವಿರುದ್ಧ ಭುಗಿಲೆದ್ದ ಆಕ್ರೋಶ: ಪದ್ಮಶ್ರೀ ಹಿಂಪಡೆಯುವಂತೆ ಹೆಚ್ಚಾಯ್ತು ಕೂಗು

1947ರಲ್ಲಿ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಭಿಕ್ಷೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಾಲಿವುಡ್​ ನಟಿ ಕಂಗನಾ ರಣಾವತ್​​​ರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.

ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್​, ದೇಶಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ನರೇಂದ್ರ ಮೋದಿ ದೇಶದ ಅಧಿಕಾರವನ್ನು ವಹಿಸಿಕೊಂಡ ಬಳಿಕ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದ್ರು.

ಕಂಗನಾರ ಈ ಹೇಳಿಕೆಗೆ ಕಾಂಗ್ರೆಸ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಆಕ್ರೋಶ ಹೊರಹಾಕಿದ ಕಾಂಗ್ರೆಸ್​ ಹಿರಿಯ ನಾಯಕ ಆನಂದ್​ ಶರ್ಮಾ, ಈ ರೀತಿಯ ಹೇಳಿಕೆ ನೀಡಿರೋದು ನಿಜಕ್ಕೂ ಆಘಾತಕಾರಿಯಾಗಿದೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಕೂಡಲೇ ಕಂಗನಾ ರಣಾವತ್​ಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್​ ಪಡೆಯಬೇಕು ಎಂದು ಆಗ್ರಹಿಸಿದ್ದರು.

ಕಂಗನಾ ರಣಾವತ್​​ ನೀಡಿರುವ ಈ ಹೇಳಿಕೆಯು ಮಹಾತ್ಮ ಗಾಂಧಿ, ನೆಹರೂ ಹಾಗೂ ಸರ್ದಾರ್​ ವಲ್ಲಭಬಾಯ್​ ಪಟೇಲ್​ ನೇತೃತ್ವದಲ್ಲಿ ಸಿಕ್ಕಿದ ದೇಶದ ಸ್ವಾತಂತ್ರ್ಯವನ್ನು ಅವಮಾನಿಸಿದೆ. ಜೊತೆಯಲ್ಲಿ ಭಗತ್​ ಸಿಂಗ್​, ಚಂದ್ರಶೇಖರ್ ಆಜಾದ್​ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ತ್ಯಾಗಕ್ಕೂ ಅಪಮಾನ ಬಗೆದಿದೆ ಎಂದು ಸರಣಿ ಟ್ವೀಟ್​ಗಳ ಮೂಲಕ ಆನಂದ್​ ಶರ್ಮಾ ಆಕ್ರೋಶ ಹೊರಹಾಕಿದ್ದಾರೆ.

ಇಂತಹ ಪ್ರಶಸ್ತಿಗಳನ್ನು ನೀಡುವ ಮುನ್ನ ಆ ವ್ಯಕ್ತಿಯು ರಾಷ್ಟ್ರ ಹಾಗೂ ದೇಶದ ವೀರರಿಗೆ ಅವಮಾನ ಮಾಡದಂತಹ ವ್ಯಕ್ತಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ರು.

ಬಿಹಾರದಲ್ಲಿ ಎನ್​ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವ ಹಿಂದೂಸ್ತಾನಿ ಅವಾಮ್​ ಮೋರ್ಚಾ ಅಧ್ಯಕ್ಷ ಜಿತನ್​ ರಾಮ್​ ಮಾಂಝಿ, ಈ ನಟಿಯನ್ನು ಎಲ್ಲಾ ಸುದ್ದಿ ವಾಹಿನಿಗಳನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ. ಪದ್ಮಶ್ರೀಯನ್ನು ಕಂಗನಾರಿಂದ ವಾಪಸ್​ ಪಡೆಯಬೇಕು. ಇಲ್ಲವಾದಲ್ಲಿ ಗಾಂಧಿ, ನೆಹರೂ, ಪಟೇಲ್​, ಭಗತ್​ ಸಿಂಗ್​, ಕಲಾಂ, ಸಾರ್ವಕರ್​ ಅವರು ಸ್ವಾತಂತ್ರ್ಯಕ್ಕಾಗಿ ಭಿಕ್ಷೆ ಬೇಡಿದ್ದರು ಎಂದು ಜಗತ್ತು ಭಾವಿಸುತ್ತೆ ಅಂತಾ ಪ್ರತಿಕ್ರಿಯಿಸಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಸೇನೆ ನಾಯಕ ನೀಲಂ ಗೋರ್ಹೆ, ಕಂಗನಾ ನೀಡಿರುವ ಹೇಳಿಕೆಗೆ ಆಕೆಯ ಮೇಲೆ ದೇಶದ್ರೋಹದ ಆರೋಪ ಹೊರಿಸಬೇಕು. ಅಲ್ಲದೇ ಆಕೆಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನೂ ವಾಪಸ್​ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡಿರುವ ಎನ್​ಸಿಪಿ ಪಕ್ಷದ ನಾಯಕ ಹಾಗೂ ಸಚಿವ ನವಾಬ್​ ಮಲ್ಲಿಕ್ ಕೂಡ ಈ ವಿಚಾರವಾಗಿ ಮಾತನಾಡಿದ್ದರು, ಆಕೆ ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸಿದ್ದಾರೆ. ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್​ ಪಡೆಯಬೇಕು. ಕಂಗನಾ ರಣಾವತ್​ ಈ ರೀತಿಯ ಹೇಳಿಕೆ ನೀಡೋಕೂ ಮುನ್ನ ಮಲಾನಾ ಕ್ರೀಮ್​ ಸೇವಿಸಿರಬೇಕು ಎಂದು ವಂಗ್ಯವಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...