alex Certify ಮೋದಿ ಆಳ್ವಿಕೆಯಲ್ಲಿ ಬಾಳಲು ನಾವು ಸಿದ್ದ; ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕ್ ಪ್ರಜೆಯ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಆಳ್ವಿಕೆಯಲ್ಲಿ ಬಾಳಲು ನಾವು ಸಿದ್ದ; ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕ್ ಪ್ರಜೆಯ ಬೇಡಿಕೆ

ನೆರೆ ರಾಷ್ಟ್ರ ಪಾಕಿಸ್ತಾನ ಇನ್ನಿಲ್ಲದಂತೆ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು ಆ ದೇಶದ ಜನಸಾಮಾನ್ಯರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಪೆಟ್ರೋಲ್ – ಡೀಸೆಲ್ ಬೆಲೆ ಮುಗಿಲು ಮುಟ್ಟಿದ್ದು, ಆಹಾರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳಿಗೆ ಹಾಹಾಕಾರ ಮುಗಿಲು ಮುಟ್ಟಿದೆ. ಹೀಗಾಗಿ ಜನ ಬೀದಿಗಿಳಿದು ಪಾಕಿಸ್ತಾನದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಎಲ್ಲ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನದ ಪ್ರಜೆಗಳು, ಭಾರತದಲ್ಲಿ ಆಶ್ರಯ ಪಡೆದರೂ ಪರವಾಗಿಲ್ಲ. ಈ ದೇಶದಿಂದ ಜೀವಂತವಾಗಿ ಹೋದರೆ ಸಾಕು ಎಂಬ ಮನೋಭಾವ ಹೊಂದಿದ್ದು, ಇದರ ಮಧ್ಯೆ ಪತ್ರಕರ್ತೆಯೊಬ್ಬರೊಂದಿಗೆ ಮಾತನಾಡಿರುವ ವ್ಯಕ್ತಿ, ಪಾಕಿಸ್ತಾನವನ್ನು ಸಹ ನರೇಂದ್ರ ಮೋದಿಯವರೇ ಆಡಳಿತ ಮಾಡಲಿ ಎಂದು ಹೇಳಿದ್ದಾರೆ.

ಭಾರತ – ಪಾಕಿಸ್ತಾನ ವಿಭಜನೆ ಆಗಲೇಬಾರದಿತ್ತು. ವಿಭಜನೆಯಾಗದಿದ್ದರೆ ನಾನು ಹಾಗೂ ನನ್ನ ದೇಶದ ಜನತೆ ಈ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಊಟವನ್ನಾದರೂ ಕೊಡಬಹುದಾಗಿತ್ತು. ಆದರೆ ಈಗ ನಾವು ಬೀದಿಗೆ ಬಿದ್ದಿದ್ದೇವೆ ಎಂದು ಹೇಳಿದ್ದಾನೆ. ಅಲ್ಲದೆ ಪಾಕಿಸ್ತಾನದಲ್ಲಿ ನಾನು ಹುಟ್ಟಲೇ ಬಾರದಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ.

— Meenakshi Joshi ( मीनाक्षी जोशी ) (@IMinakshiJoshi) February 23, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...