alex Certify ಸಲುಗೆಯಿಂದಿದ್ದ ಮಹಿಳೆಯ ಪತಿ ಕೊಂದ ಸ್ನೇಹಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲುಗೆಯಿಂದಿದ್ದ ಮಹಿಳೆಯ ಪತಿ ಕೊಂದ ಸ್ನೇಹಿತ

ಬೆಂಗಳೂರು: ಮಹಿಳೆಯ ಜೊತೆಗೆ ಸಲುಗೆಯಿಂದ ಇದ್ದ ವ್ಯಕ್ತಿ ಒಬ್ಬ ಆಕೆಯ ಪತಿಯನ್ನು ಚಾಕುವಿನಿಂದ ಇರಿದು ಬರಬರವಾಗಿ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉದಯಕುಮಾರ್(33) ಕೊಲೆಯಾದ ವ್ಯಕ್ತಿ. ಮಹದೇವಪುರದ ಉದಯನಗರದ ಎರಡನೇ ಕ್ರಾಸ್ ಶಿವ ದೇವಸ್ಥಾನದ ಬಳಿ ಗುರುವಾರ ರಾತ್ರಿ 8.30 ರಿಂದ 10 ಗಂಟೆ ನಡುವೆ ಉದಯಕುಮಾರ್ ಅವರನ್ನು ಕೊಲೆ ಮಾಡಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿ ಅನ್ವರ್ ಖಾನ್(21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಉದಯಕುಮಾರ್ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದು, ಉದಯಕುಮಾರ್ ಬೈಕ್ ಮೆಕಾನಿಕ್ ಆಗಿದ್ದರು. ಮಮತಾ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರು. ಮೆಡಿಕಲ್ ಶಾಪ್ ಎದುರಿನ ಹೋಟೆಲ್ ನಲ್ಲಿ ಆರೋಪಿ ಅನ್ವರ್ ಖಾನ್ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ. ಮಮತಾ ಮತ್ತು ಅನ್ವರ್ ನಡುವೆ ಸ್ನೇಹ ಬೆಳೆದು ಸಲುಗೆಯಿಂದ ಇದ್ದರು. ಈ ವಿಚಾರ ತಿಳಿದು ಉದಯಕುಮಾರ್ ಪತ್ನಿಗೆ ಬೈದಾಡಿದ್ದರಿಂದ ಕೌಟುಂಬಿಕ ಕಲಹ ಉಂಟಾಗಿ ಎರಡು ತಿಂಗಳ ಹಿಂದೆ ಮಮತಾ ತವರು ಮನೆಗೆ ಹೋಗಿದ್ದಳು.

ಉದಯ್ ಮನೆಯಲ್ಲಿ ಒಬ್ಬನೇ ಇದ್ದ ವೇಳೆ ಬಂದು ಜಗಳವಾಡಿದ ಅನ್ವರ್, ಮಮತಾ ಜೊತೆಗೆ ಜಗಳವಾಡಿ ತವರು ಮನೆಗೆ ಹೋಗಲು ನೀನೇ ಕಾರಣ ಎಂದು ಚಾಕುವಿನಿಂದ ಹತ್ತಾರು ಬಾರಿ ಇರಿದು ಪರಾರಿಯಾಗಿದ್ದಾನೆ. ಕೆಲ ಸಮಯದ ನಂತರ ಮಮತಾ ಉದಯ್ ಗೆ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಕಟ್ಟಡ ಮಾಲೀಕರಿಗೆ ಕರೆ ಮಾಡಿ ಹೇಳಿದ್ದಾರೆ. ನಂತರ ಮೈದುನನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆತ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಉದಯ್ ಬಿದ್ದಿರುವುದು ಕಂಡು ಬಂದಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಾಥಮಿಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಕೆಲವೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಮತಾ ತವರು ಮನೆ ಸೇರಿ ಎರಡು ತಿಂಗಳಾಗಿದ್ದು, ಆರೋಪಿ ಅನ್ವರ್ ಈಗ ಮನೆಗೆ ನುಗ್ಗಿ ಉದಯ್ ನನ್ನು ಕೊಲೆ ಮಾಡಿದ್ದಾನೆ. ಇದರ ಹಿಂದೆ ಮಮತಾ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ಮಮತಾ ಮೇಲಿನ ಮೋಹಕ್ಕಾಗಿ ಅನ್ವರ್ ಕೊಲೆ ಮಾಡಿದ್ದಾನೆ ಎಂಬುದರ ಬಗ್ಗೆ ಹೆಚ್ಚಿನ ತನಕ್ಕೆ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...