alex Certify ರೆಸಾರ್ಟ್ ನಲ್ಲಿ ಕಾಡು ಕುರಿ ಮಾಂಸದ ಅಡುಗೆ ಮಾಡುವಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಸಾರ್ಟ್ ನಲ್ಲಿ ಕಾಡು ಕುರಿ ಮಾಂಸದ ಅಡುಗೆ ಮಾಡುವಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ

ಹಾಸನ: ಕಾಡು ಕುರಿ ಬೇಟೆಯಾಡಿದ್ದ ಒಬ್ಬನನ್ನು ಬಂಧಿಸಿ 12 ಕೆಜಿ ಮಾಂಸ ಜಪ್ತಿ ಮಾಡಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನುಬಾಳು ಬಳಿ ಬಂಧಿಸಲಾಗಿದೆ.

ಒಂದು ಬಂದೂಕ್, ಪಿಕಪ್ ವಾಹನ, ಕಾರ್, ಬೈಕ್, ಗರಗಸ ಜಪ್ತಿ ಮಾಡಲಾಗಿದೆ. ಅವಿನಾಶ್ ಮತ್ತು ಸ್ನೇಹಿತರಾದ ಶಿಶಿರ್, ಜೀವನ್, ಕೀರ್ತನ್ ವಿರುದ್ಧ ಅರಣ್ಯಾಧಿಕಾರಿಗಳು ಕೇಸು ದಾಖಲಿಸಿದ್ದಾರೆ.

ಕಾಡು ಕುರಿ ಬೇಟೆಯಾಡಿ ರೆಸಾರ್ಟ್ ನಲ್ಲಿ ಅಡುಗೆ ಮಾಡಲು ಸಿದ್ಧತೆ ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅವಿನಾಶ್, ಜೀವನ್, ಕೀರ್ತನ್ ಪರಾರಿಯಾಗಿದ್ದಾರೆ. ಅವಿನಾಶ್ ಸ್ನೇಹಿತ ಶಿಶಿರ್ ನನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಎಸಿಎಫ್ ಸುರೇಶ್ ಬಾಬು, ಆರ್.ಎಫ್.ಒ. ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...